Advertisement

ಅಭ್ಯರ್ಥಿಗಳ ಹೆಸರಿಗಿಲ್ಲ ಜಾಗ!

10:33 AM Mar 28, 2017 | Team Udayavani |

ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ನಿಧನದಿಂದ ತೆರವಾಗಿರುವ ಆರ್‌ಕೆ ನಗರ ಕ್ಷೇತ್ರದ ಉಪ ಚುನಾವಣೆ ಏ.12ರಂದು ನಿಗದಿಯಾಗಿದ್ದು, ಮತದಾನ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಚುನಾವಣಾ ಆಯೋಗ ಧರ್ಮಸಂಕಟಕ್ಕೆ ಸಿಲುಕಿದೆ. ಕಾರಣ, ಕ್ಷೇತ್ರದಿಂದ 82 ನಾಮಪತ್ರ ಸಲ್ಲಿಕೆಯಾಗಿರುವುದು ಮತ್ತು ಇವಿಎಂಗಳಲ್ಲಿ ಕೇವಲ 63 ಅಭ್ಯರ್ಥಿಗಳ ಹೆಸರು ಸೇರಿಸಲು ಅವಕಾಶ ಇರುವುದು! ಮೂಲಗಳ ಪ್ರಕಾರ 11 ಡಮ್ಮಿ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯಲಿದ್ದಾರೆ. ಆದರೆ ಆಯೋಗದ ತಲೆನೋವು ಕಡಿಮೆಯಾಗಲು ಇವರ ಹೊರತು ಇನ್ನೂ 10 ಮಂದಿ ನಾಮಪತ್ರ ಹಿಂಪಡೆಯಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next