Advertisement

ಸರ್ಕಾರಿ ಬಸ್‌ ಡಿಪೋ ಮೇಲ್ಛಾವಣಿ ಕುಸಿದು 8 ಮಂದಿ ದುರ್ಮರಣ 

02:47 PM Oct 20, 2017 | |

ನಾಗಪಟ್ಟಣಂ: ಜಿಲ್ಲೆಯ ಪೊರಾಯರ್‌ ಎಂಬಲ್ಲಿ ಸರ್ಕಾರಿ ಬಸ್‌ಸ್ಟಾಂಡ್‌ನ‌ ವಿಶ್ರಾಂತಿ ಕೊಠಡಿಯ ಮೇಲ್‌ಛಾವಣಿ ಕುಸಿದು 8 ಮಂದಿ ದಾರುಣವಾಗಿ ಸಾವನ್ನಪ್ಪಿ, 3 ಮಂದಿ ಗಂಭೀರವಾಗಿ ಗಾಯಗೊಂಡ ಭೀಕರ ಅವಘಡ ಶುಕ್ರವಾರ ನಸುಕಿನ ವೇಳೆ ಸಂಭವಿಸಿದೆ.

Advertisement

ಡಿಪೋದಲ್ಲಿ ಮಲಗಿದ್ದ 11 ಮಂದಿ ಪೈಕಿ 8 ಮಂದಿ ಸœಳದಲ್ಲೇ ಸಾವನ್ನಪ್ಪಿದರೆ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕಟ್ಟಡ 60 ವರ್ಷ ಹಳೆಯದ್ದು ಎಂದು ತಿಳಿದು ಬಂದಿದ್ದು, ಮೃತರೆಲ್ಲರು ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ಎನ್ನಲಾಗಿದೆ. 

ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಮೃತರಿಗೆ ತಲಾ 7.5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ 1.5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next