Advertisement

ತಲ್ವಾರ್‌ ದಂಪತಿ ಖುಲಾಸೆ ಹೇಮರಾಜ್‌ ಪತ್ನಿ ಸುಪ್ರೀಂಗೆ

06:15 AM Dec 16, 2017 | Team Udayavani |

ಹೊಸದಿಲ್ಲಿ : ಆರುಷಿ-ಹೇಮರಾಜ್‌ ಮೊಕದ್ದಮೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾಗಿದ್ದ ಆರುಷಿ ಪೋಷಕರಾದ ರಾಜೇಶ್‌ ತಲ್ವಾರ್‌ ಮತ್ತು ನೂಪುರ್‌ ತಲ್ವಾರ್‌ರನ್ನು ಕೋರ್ಟ್‌ ಖುಲಾಸೆಗೊಳಿಸಿದ್ದನ್ನು ಹೇಮರಾಜ್‌ ಪತ್ನಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. 

Advertisement

ಅಕ್ಟೋಬರ್‌ನಲ್ಲಿ  ತಲ್ವಾರ್‌ ದಂಪತಿಯನ್ನು ಅಲಹಾಬಾದ್‌ ಹೈಕೋರ್ಟ್‌ ನಿರ್ದೋಷಿಗಳು ಎಂದು ತೀರ್ಪು ನೀಡಿತ್ತು. ಅವರ ವಿರುದ್ಧ ಸಾಕ್ಷ್ಯಾಧಾರಗಳಿಲ್ಲವೆಂದು ಕೋರ್ಟ್‌ ಹೇಳಿತ್ತು.  ಮತ್ತೂಮ್ಮೆ ಈ ಮೊಕದ್ದಮೆಯ ತನಿಖೆಯಾಗಬೇಕು ಎಂದು ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಈ ಪ್ರಕರಣ 2008ರ ಮೇ 16ರಂದು ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next