Advertisement

ಪೌರ ಕಾರ್ಮಿಕರ ಮನೆಗೆ ರೇಶನ್

05:32 PM Apr 27, 2020 | Naveen |

ತಾಳಿಕೋಟೆ: ಜನರ ಆರೋಗ್ಯ ರಕ್ಷಣೆ ಮತ್ತು ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಶ್ರಮಿಸುತ್ತಿರುವ ಪೌರ ಕಾರ್ಮಿಕರ ಸೇವೆ ಶ್ಲಾಘನೀಯ ಎಂದು ಶಾಸಕ ಎ. ಎಸ್‌.ಪಾಟೀಲ(ನಡಹಳ್ಳಿ) ಹೇಳಿದರು.

Advertisement

ಪಟ್ಟಣದ ಪುರಸಭೆ ಆವರಣದಲ್ಲಿ ಇತ್ತೀಚೆಗೆ ಪೌರ ಕಾರ್ಮಿಕರಿಗೆ ದಿನಸಿ ಕಿಟ್‌ ವಿತರಿಸಿ ಮಾತನಾಡಿದ ಅವರು, ತಾಳಿಕೋಟೆ ಪಟ್ಟಣದಲ್ಲಿ 50 ಸಾವಿರ ಜನರ ಆರೋಗ್ಯ ರಕ್ಷಣೆಗೆ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೊರೊನಾ ಭೀತಿ ಮಧ್ಯೆಯೂ ಜನರಿಗೋಸ್ಕರ, ಊರಿಗೋಸ್ಕರ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಮನೆ ಬಾಗಿಲಿಗೆ ಉಚಿತವಾಗಿ ರೇಶನ್‌ ಒದಗಿಸುವ ಕೆಲಸ ಮಾಡುವೆ. ಪೌರಕಾರ್ಮಿಕರಿಗೆ ಎನ್‌ 95 ಮಾಸ್ಕ್, ಸ್ಯಾನಿಟೈಸರ್‌ ಪೂರೈಸುವೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಸಿ.ವಿ.ಕುಲಕರ್ಣಿ, ಸದಸ್ಯರಾದ ಅಕ್ಕಮಹಾದೇವಿ ಕಟ್ಟಿಮನಿ, ವಾಸುದೇವ ಹೆಬಸೂರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಬಸು ಕುಂಬಾರ, ಬಸವರಾಜ ಹೊಟ್ಟಿ, ಜಯಸಿಂಗ್‌ ಮೂಲಿಮನಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next