Advertisement

ಕುಷ್ಟಗಿಯಲ್ಲಿ ಸೇವೆ ಸಲ್ಲಿಸಿದ್ದ ತಹಸೀಲ್ದಾರ ಕೋವಿಡ್ ಗೆ ಬಲಿ

04:42 PM May 16, 2021 | Team Udayavani |

ಕುಷ್ಟಗಿ : ತಹಶೀಲ್ದಾರ ಆಗಿ ಸೇವೆಯಲ್ಲಿದ್ದ ವೇದವ್ಯಾಸ ಮುತಾಲಿಕ(54) ಕೋವಿಡ್ ಗೆ ಬಲಿಯಾಗಿದ್ದಾರೆ.

Advertisement

ಮೂಲತಃ ಕುಷ್ಟಗಿಯ ನಿವಾಸಿ ಯಾಗಿದ್ದ ವೇದವ್ಯಾಸ ಮುತಾಲಿಕ ಅವರು ಕುಷ್ಟಗಿ ಗ್ರೇಡ್ 2  ತಹಸೀಲ್ದಾರ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಇಲಕಲ್ ತಹಶೀಲ್ದಾರ ಆಗಿ ಸೇವೆ ಸಲ್ಲಿಸಿದ ಬಳಿಕ ಮುಂಡಗೋಡ್ ಗೆ ವರ್ಗಾವಣೆಯಾಗಿದ್ದರೂ ಹೋಗಿರಲಿಲ್ಲ. ಕೊಪ್ಪಳ‌ ಜಿಲ್ಲಾಡಳಿತ ಕಛೇರಿಯಲ್ಲಿ ಯಾವೂದೇ ಪೋಸ್ಟಿಂಗ್ ಇಲ್ಲದೇ ಸೇವೆಯಲ್ಲಿದ್ದರು.

ಇದನ್ನೂ ಓದಿ : ಬೌರಿಂಗ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ವ್ಯವಸ್ಥೆ: ಸಚಿವ ಡಾ.ಕೆ.ಸುಧಾಕರ್

ಇತ್ತೀಚಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ 12.30ಕ್ಕೆ  ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next