Advertisement

ದಾವಣಗೆರೆ: ಅನಗತ್ಯವಾಗಿ ಓಡಾಡುವವರಿಗೆ ದಂಡ ವಿಧಿಸಿದ ತಹಶೀಲ್ದಾರ್

02:11 PM May 10, 2021 | Team Udayavani |

ದಾವಣಗೆರೆ: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಸೋಮವಾರದಿಂದ ಕಠಿಣ ಲಾಕ್ ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ  ದಾವಣಗೆರೆಯಲ್ಲಿ ಸ್ವತಃ ತಹಶೀಲ್ದಾರ್ ಬಿ.ಎನ್. ಗಿರೀಶ್ ರಸ್ತೆಗೆ ಇಳಿದಿದ್ದು, ಅನವಶ್ಯಕವಾಗಿ ಓಡಾಡುತ್ತಿದ್ದ ಜನರಿಗೆ ದಂಡವನ್ನು ವಿಧಿಸುವ ಕೆಲಸ ಮಾಡಿದರು.

Advertisement

ಜಯದೇವ ಸರ್ಕಲ್‌ನಲ್ಲಿ ತಪಾಸಣೆ ನಡೆಸುತ್ತಿದ್ದು, ಪೊಲೀಸರು ಹಾಗೂ ಮೇಯರ್ ಎಸ್.ಟಿ. ವೀರೇಶ್ ಸಹ ಸಾಥ್ ನೀಡಿದರು. 10 ಗಂಟೆ ನಂತರ ಓಡಾಡುವ ವಾಹನಗಳನ್ನು ತಡೆದು ತಪಾಸಣೆ ನಡೆಸಿ ದಂಡ ವಿಧಿಸಿದರು.  ಅಲ್ಲದೆ ಸಾಕಷ್ಟು ಬೈಕ್ ಗಳನ್ನು ಈಗಾಗಲೇ ಸೀಜ್ ಮಾಡಿ ದಂಡ ವಸೂಲಿ ಮಾಡಲಾಗಿದೆ. ಮೊದಲ‌ ದಿನ ಜನ ಓಡಾಡುತ್ತಾರೆ ನಾಳೆಯಿಂದ ಕಡಿಮೆಯಾಗಬಹುದು ಎಂದು ತಹಶೀಲ್ದಾರ್ ಗಿರೀಶ್ ತಿಳಿಸಿದರು.

ಇದನ್ನೂ ಓದಿ:ಕೋವಿಡ್‌ಗೆ ಪತಿ-ಪತ್ನಿ ಬಲಿ: ಅನಾಥವಾಯ್ತು ಐದು ವರ್ಷದ ಹೆಣ್ಣುಮಗು

ದಾವಣಗೆರೆಯ ಬಹುತೇಕ ಕಡೆ ಅಂಗಡಿ, ವಾಣಿಜ್ಯ ಸಂಕೀರ್ಣ ಮುಚ್ಚಿದ್ದವು. ಅಗತ್ಯ ಕೆಲಸದ ಹಿನ್ನೆಲೆಯಲ್ಲಿ ಬೈಕ್, ಆಟೋರಿಕ್ಷಾ, ಕಾರುಗಳಲ್ಲಿ ಸಂಚರಿಸುವುದು ಕಂಡು ಬಂದಿತು.‌ ಬೆಳಗ್ಗೆಯಿಂದ 15 ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದರು

Advertisement

Udayavani is now on Telegram. Click here to join our channel and stay updated with the latest news.

Next