Advertisement

ಅಂಧರ ಟಿ 20 ವಿಶ್ವಕಪ್ : ಬಾಂಗ್ಲಾದೇಶವನ್ನು ಸೋಲಿಸಿ ಪ್ರಶಸ್ತಿ ಗೆದ್ದ ಭಾರತ

08:18 PM Dec 17, 2022 | Team Udayavani |

ಬೆಂಗಳೂರು: ನಾಯಕ ಅಜಯ್ ಕುಮಾರ್ ರೆಡ್ಡಿ ಮತ್ತು ಸುನೀಲ್ ರಮೇಶ್ ಅವರ ಅದ್ಭುತ ಶತಕಗಳ ನೆರವಿನಿಂದ ಭಾರತ ಶನಿವಾರ ಇಲ್ಲಿ ನಡೆದ ಅಂಧರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು 120 ರನ್‌ಗಳಿಂದ ಸೋಲಿಸಿ ಸತತ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದೆ.

Advertisement

ರಮೇಶ್ 63 ಎಸೆತಗಳಲ್ಲಿ 24 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 136 ರನ್ ಸಿಡಿಸಿದರೆ, ರೆಡ್ಡಿ 50 ಎಸೆತಗಳಲ್ಲಿ 100 ರನ್ ಬಾರಿಸಿದರು. ಇಬ್ಬರು ಮೂರನೇ ವಿಕೆಟ್‌ಗೆ 248 ರನ್‌ಗಳ ಅಜೇಯ ಜತೆಯಾಟವನ್ನು ನಡೆಸಿದರು.  ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ 20 ಓವರ್‌ಗಳಲ್ಲಿ ಎರಡು ವಿಕೆಟ್‌ಗಳಿಗೆ 277 ರನ್ ಗಳಿಸಿತು.

ಬೃಹತ್ ಗುರಿ ಬೆನ್ನತ್ತಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದೇಶ ಪರ ಸಲ್ಮಾನ್ ಔಟಾಗದೆ 77 ರನ್ ಗಳಿಸಿದರು. ಚಾಂಪಿಯನ್ಸ್ ಭಾರತ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿತ್ತು.

29ಕ್ಕೆ 2 ಭಾರತವು  ಹೊಡೆತವನ್ನು ಅನುಭವಿಸಿತು. ವಿಕೆಟ್ ಕಳೆದುಕೊಂಡ ಅದರ ನಂತರ ಬಾಂಗ್ಲಾದೇಶದ ಬೌಲಿಂಗ್ ದಾಳಿಯನ್ನು ಎದುರಿಸಿದ ರಮೇಶ್ ಮತ್ತು ರೆಡ್ಡಿ ಅವರು ಅಮೋಘ ಆಟವಾಡಿದರು. ರೆಡ್ಡಿ ಅವರು ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ತಮ್ಮ ಶತಕದ ಗುರಿ ತಲುಪಿದರು. ರಮೇಶ್ ಬೌಂಡರಿಯೊಂದಿಗೆ ಪಂದ್ಯಾವಳಿಯ ಅವರ ಮೂರನೇ ಶತಕವನ್ನು ದಾಖಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next