Advertisement
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕರ್ನಾಟಕ 17.2 ಓವರ್ಗಳಲ್ಲಿ ಜುಜುಬಿ 87 ರನ್ನಿಗೆ ಗಂಟುಮೂಟೆ ಕಟ್ಟಿದರೆ, ಪಂಜಾಬ್ 12.4 ಓವರ್ಗಳಲ್ಲಿ ಒಂದೇ ವಿಕೆಟಿಗೆ 89 ರನ್ ಬಾರಿಸಿ ಸೆಮಿಫೈನಲ್ಗೆ ಲಗ್ಗೆ ಇರಿಸಿತು.
Related Articles
Advertisement
ಕರ್ನಾಟಕದ ಮೊದಲ 4 ವಿಕೆಟ್ ಕೇವಲ 2 ರನ್ ಅಂತರದಲ್ಲಿ ಉದುರಿತು. ನೋಲಾಸ್ 24ರಲ್ಲಿದ್ದ ರಾಜ್ಯ ತಂಡ, 26ಕ್ಕೆ ತಲಪುವಷ್ಟರಲ್ಲಿ ನಾಲ್ವರನ್ನು ಕಳೆದುಕೊಂಡಿತು. ಪಡಿಕ್ಕಲ್ (11), ನಾಯರ್ (12), ದೇಶಪಾಂಡೆ (0) ಮತ್ತು ಶರತ್ (2) ಪೆವಿಲಿಯನ್ ಸೇರಿಕೊಂಡರು. ಅನಿರುದ್ಧ ಜೋಶಿ (27) ಹೋರಾಟದ ಸೂಚನೆಯಿತ್ತರೂ ಉಳಿದವರು ಪಟಪಟನೆ ಉದುರಿದರು. ಕೊನೆಯ 5 ವಿಕೆಟ್ 15 ರನ್ ಅಂತರದಲ್ಲಿ ಹಾರಿ ಹೋಯಿತು!
ಸುಲಭ ಚೇಸಿಂಗ್
ಜವಾಬು ನೀಡತೊಡಗಿದ ಪಂಜಾಬ್ ಅಭಿಷೇಕ್ ಶರ್ಮ (4) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಪ್ರಭ್ಶಿಮ್ರಾನ್ ಸಿಂಗ್ (ಅಜೇಯ 49) ಮತ್ತು ಮನ್ದೀಪ್ ಸಿಂಗ್ (ಅಜೇಯ 35) ಅವರನ್ನು ಅಲುಗಾಡಿಸಲು ಕರ್ನಾಟಕದ ಬೌಲರ್ಗಳಿಂದ ಸಾಧ್ಯವಾಗಲಿಲ್ಲ. ಹೀಗೆ ಪಂಜಾಬ್ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿತು. ಮನ್ದೀಪ್ ಸಿಂಗ್ ಪಡೆ ಲೀಗ್ ಹಂತದ ಐದೂ ಪಂದ್ಯಗಳನ್ನು ಗೆದ್ದು ನಾಕೌಟ್ಗೆ ಲಗ್ಗೆ ಇರಿಸಿತ್ತು.
ಸಂಕ್ಷಿಪ್ತ ಸ್ಕೋರ್ :
ಕರ್ನಾಟಕ-17.2 ಓವರ್ಗಳಲ್ಲಿ 87 (ಜೋಶಿ 27, ಶ್ರೇಯಸ್ ಗೋಪಾಲ್ 13, ನಾಯರ್ 12, ಪಡಿಕ್ಕಲ್ 11, ಕೌಲ್ 15ಕ್ಕೆ 3, ಸಂದೀಪ್ ಶರ್ಮ 17ಕ್ಕೆ 2, ಆರ್ಷದೀಪ್ 16ಕ್ಕೆ 2, ರಮಣ್ದೀಪ್ 22ಕ್ಕೆ 2). ಪಂಜಾಬ್-12.4 ಓವರ್ಗಳಲ್ಲಿ ಒಂದು ವಿಕೆಟಿಗೆ 89 (ಪ್ರಭ್ಶಿಮ್ರಾನ್ ಔಟಾಗದೆ 49, ಮನ್ದೀಪ್ ಔಟಾಗದೆ 35, ಮಿಥುನ್ 11ಕ್ಕೆ 1).