Advertisement

ಸಿಡ್ನಿ: ಭಾರತೀಯರ ಅಭ್ಯಾಸಕ್ಕೆ ಮಳೆ ಅಡ್ಡಿ

01:20 AM Jan 11, 2019 | |

ಸಿಡ್ನಿ: ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಭಾರತದ ಗೆಲುವನ್ನು ಕಸಿದ ಮಳೆರಾಯ ಈಗ ಸಿಡ್ನಿ ಏಕದಿನ ಪಂದ್ಯಕ್ಕೂ “ಅತಿಥಿ’ಯಾಗಿ ಆಗಮಿಸುವ ಸಾಧ್ಯತೆಯೊಂದು ಗೋಚರಿಸಿದೆ.

Advertisement

ಭಾರತ-ಆಸ್ಟ್ರೇಲಿಯ ನಡುವಿನ ಮೊದಲ ಏಕದಿನ ಪಂದ್ಯ ಶನಿವಾರ “ಸಿಡ್ನಿ ಕ್ರಿಕೆಟ್‌ ಗ್ರೌಂಡ್‌’ನಲ್ಲಿ ನಡೆಯಲಿದ್ದು, ಇದಕ್ಕಾಗಿ ಅಭ್ಯಾಸ ಆರಂಭಿಸಿದ ಭಾರತದ ಆಟಗಾರರಿಗೆ ಗುರುವಾರ ಮಳೆಯಿಂದ ಅಡ್ಡಿಯಾಯಿತು. ಹೀಗಾಗಿ ಟೀಮ್‌ ಇಂಡಿಯಾ ಸದಸ್ಯರೆಲ್ಲ ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ಮುಂದುವರಿಸಬೇಕಾಯಿತು.

ಬುಧವಾರ ಸಿಡ್ನಿಯಲ್ಲಿ ಪ್ರಖರ ಬಿಸಿಲು ಕಾಣಿಸಿತ್ತು. ಹೀಗಾಗಿ ಅಭ್ಯಾಸಕ್ಕೆ ಯಾವುದೇ ಅಡ್ಡಿಯಾಗಿರಲಿಲ್ಲ. ಆದರೆ ಗುರುವಾರ ಧೋನಿ, ಜಾಧವ್‌, ರಾಯುಡು ಮೊದಲಾದವರೆಲ್ಲ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಂಗಾರ್‌ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಲು ಯೋಜನೆ ಹಾಕಿಕೊಂಡಾಗಲೇ ಮಳೆ ಸುರಿಯಿತು.

Advertisement

Udayavani is now on Telegram. Click here to join our channel and stay updated with the latest news.

Next