Advertisement

IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ

10:46 PM May 04, 2024 | Team Udayavani |

ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 4 ವಿಕೆಟ್ ಗಳ ಜಯ ಸಾಧಿಸಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲಕ್ಕೇರಿದ್ದು ಏಳನೇ ಸ್ಥಾನಕ್ಕೆ ಬಂದಿದೆ.

Advertisement

ಆರ್ ಸಿಬಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬಿಗಿ ದಾಳಿ ನಡೆಸಿ ಗುಜರಾತ್ ತಂಡವನ್ನು 19.3 ಓವರ್ ಗಳಲ್ಲಿ 147 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಬೌಲರ್ ಗಳು ಯಶಸ್ವಿಯಾದರು. ಗುರಿ ಬೆನ್ನಟ್ಟಿದ ಆರ್ ಸಿಬಿ 13.4 ಓವರ್ ಗಲ್ಲಿ 152 ಗಳಿಸಿ  ಜಯಭೇರಿ ಬಾರಿಸಿತು.

ಆರ್ ಸಿಬಿ ಆಡಿದ 11ನೇ ಪಂದ್ಯದಲ್ಲಿ 4 ನೇ ಜಯದ ನಗು ಬೀರಿತು. ಗುಜರಾತ್ 11ನೇ ಪಂದ್ಯದಲ್ಲಿ 7 ನೇ ಸೋಲು ಕಂಡಿತು.

ಅಬ್ಬರಿಸಿದ ನಾಯಕ ಫ್ಲೆಸಿಸ್ 22 ಎಸೆತಗಳಲ್ಲಿ 64 ರನ್ ಗಳಿಸಿ ಔಟಾದರು. ಅವರು ಅಮೋಘ 10 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿದ್ದರು.ವಿಲ್ ಜಾಕ್ಸ್ 1 ರನ್ ಗಳಿಸಿ ನಿರ್ಗಮಿಸಿದರು. ರಜತ್ ಪಾಟಿದಾರ್ ಕೂಡ 2 ರನ್ ಗೆ ನಿರ್ಗಮಿಸಿದರು.ಮ್ಯಾಕ್ಸ್ ವೆಲ್ 4 ರನ್ ಗೆ ಆಟ ಮುಗಿಸಿ ಮತ್ತೆ ವಿಫಲರಾದರು. ಕ್ಯಾಮರೂನ್ ಗ್ರೀನ್ ಕೂಡ ಒಂದೇ ರನ್ ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು. ವಿರಾಟ್ ಕೊಹ್ಲಿ 27 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರು.  92ಕ್ಕೆ ಮೊದಲ ವಿಕೆಟ್ ಕಳೆದುಕೊಂಡ ಆರ್ ಸಿಬಿ ನಾಟಕೀಯ ಕುಸಿತ ಕಂಡಿತು. 117 ರನ್ ಆಗುವಷ್ಟರಲ್ಲಿ 6 ನೇ ವಿಕೆಟ್ ಕಳೆದುಕೊಂಡಿತು. ದಿನೇಶ್ ಕಾರ್ತಿಕ್ 21(12 ಎಸೆತ) , ಸ್ವಪ್ನಿಲ್ ಸಿಂಗ್ 15(9ಎಸೆತ) ರನ್ ಗಳಿಸಿ ಔಟಾಗದೆ ಉಳಿದರು. ಇನ್ನೂ 38 ಎಸೆತ ಬಾಕಿ ಇರುವಾಗಲೇ ಗೆಲುವಿನ ಗುರಿ ಮುಟ್ಟಿಸಿದರು.

ಆರಂಭಿಕ ಆಘಾತ
ಗುಜರಾತ್ 19 ರನ್ ಆಗುವಷ್ಟರಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡಿತು. ಆರ್ ಸಿಬಿ ಬೌಲರ್ ಗಳು ಸಣ್ಣ ಮೊತ್ತಕ್ಕೆ ಕಟ್ಟಿ ಹಾಕಲು ಯಶಸ್ವಿಯಾದರು. ಶಾರುಖ್ ಖಾನ್ 37 ರನ್ ಗಳಿಸಿದ್ದ ವೇಳೆ ರನ್ ಔಟ್ ಆದರು. ಡೇವಿಡ್ ಮಿಲ್ಲರ್ 30, ರಾಹುಲ್ ತೆವಾಟಿಯಾ 35, ರಶೀದ್ ಖಾನ್ 18, ವಿಜಯ್ ಶಂಕರ್ 10 ರನ್ ಗಳಿಸಿ ಔಟಾದರು. ಬಿಗಿ ದಾಳಿ ನಡೆಸಿದ ಆರ್ ಸಿಬಿ ಬೌಲರ್ ಗಳ ಪೈಕಿ ಸಿರಾಜ್, ದಯಾಳ್ ಮತ್ತು ವಿಜಯ್ ಕುಮಾರ್ ವೈಶಾಕ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಗ್ರೀನ್ ಮತ್ತು ಕರ್ಣ್ ಶರ್ಮ ತಲಾ ಒಂದು ವಿಕೆಟ್ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next