Advertisement

ದಿಂಗಾಲೇಶ್ವರ ಶಾಖಾ ಮಠದ ಸ್ವಾಮೀಜಿ ಆತ್ಮಹತ್ಯೆ

07:15 AM Jan 09, 2018 | |

ಹಾನಗಲ್ಲ: ತಾಲೂಕಿನ ಹುಲ್ಲತ್ತಿಯ ಬಾಲೆಹೊಸೂರ ದಿಂಗಾಲೇಶ್ವರ ಶಾಖಾಮಠದ ಶ್ರೀ ಮಹಾಲಿಂಗ ಸ್ವಾಮೀಜಿ(38) ಭಾನುವಾರ ರಾತ್ರಿ ಮರಣಪತ್ರ ಬರೆದಿಟ್ಟು ಮಠದಲ್ಲೇ ನೇಣಿಗೆ ಶರಣಾಗಿದ್ದಾರೆ. ಸೋಮವಾರ ಬೆಳಗ್ಗೆ ಮಠಕ್ಕೆ ಪೂಜೆಗೆಂದು ಬಂದ ಅರ್ಚಕರು ನೋಡಿ ಗ್ರಾಮಸ್ಥರು ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. 

Advertisement

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾನಗಲ್ಲ ಪೊಲೀಸ್‌ ಉಪ ನಿರೀಕ್ಷಕ ಗುರುರಾಜ ಮೈಲಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಸ್ವಾಮೀಜಿ ಬರೆದಿಟ್ಟಿರುವ ಮರಣ ಪತ್ರ ದೊರೆತಿದ್ದು ಅದರಲ್ಲಿ “ನನ್ನ ಸಾವಿಗೆ ನಾನೇ ಕಾರಣ.ಯಾರೂ ಹೊಣೆಗಾರರಲ್ಲ. ಮನಃಶಾಂತಿ ಇಲ್ಲದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಮಾಧಿಯನ್ನು ಈ ಮಠದಲ್ಲೇ ಮಾಡಿ’ ಎಂದು ಬರೆಯಲಾಗಿದೆ. 

ಜ.6ರಂದು ತಡಸ ಕ್ರಾಸ್‌ ಬಳಿ ಸ್ವಾಮೀಜಿ ಕಾರು ಹಾಗೂ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾ ತದಲ್ಲಿ ಓರ್ವ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಹಾಗಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹು ದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next