Advertisement

Siddaramaiah ಪರ ಸ್ವಾಮೀಜಿ ಬ್ಯಾಟಿಂಗ್; ಕುರಿ ಹೊಲಸು ತಿನ್ನಲ್ಲ,ಕುರುಬ ತಪ್ಪು ಮಾಡಲ್ಲ

01:40 AM Aug 18, 2024 | Team Udayavani |

ಬೆಂಗಳೂರು: ಮುಡಾ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿಚಾರವಾಗಿ ಕುರುಬ ಸಮುದಾಯದ ಶ್ರೀಗಳು ಅಖಾಡಕ್ಕೆ ಇಳಿದಿದ್ದಾರೆ. ವಿಚಾರಣೆಗೆ ಅನುಮತಿ ನೀಡಿರುವ ರಾಜ್ಯಪಾಲರು ಕೇಂದ್ರ ಸರಕಾರದ ಕೈಗೊಂಬೆ ಎಂದು ಹೊಸದುರ್ಗದ ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಕಿಡಿಕಾರಿದ್ದಾರೆ.

Advertisement

ಸಿದ್ದರಾಮಯ್ಯ ಪರವಾಗಿ ಇಡೀ ಶೋಷಿತ ಸಮುದಾಯ ಇರುತ್ತದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕುರಿ ಹೊಲಸು ತಿನ್ನಲ್ಲ, ಕುರುಬ ತಪ್ಪು ಮಾಡಲ್ಲ. ಷಡ್ಯಂತ್ರದ ವಿರುದ್ಧ ಬೃಹತ್‌ ಜನಾಂದೋಲನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮನುವಾದಿಗಳ ಒತ್ತಡಕ್ಕೆ ಮಣಿದ ರಾಜ್ಯಪಾಲರು: ಅಹಿಂದ ಆರೋಪ
ರಾಜ್ಯದಲ್ಲಿನ ಕಾಂಗ್ರೆಸ್‌ ಸರಕಾರವನ್ನು ಕಿತ್ತುಹಾಕಬೇಕು. ಹಿಂದುಳಿದ ಸಮುದಾಯಗಳ ಮುಖಂಡ ಸಿದ್ದರಾಯಮ್ಯ ಅವರಿಂದ ಸಿಎಂ ಪದವಿ ಕಸಿದುಕೊಳ್ಳಬೇಕು ಎಂಬ ಉದ್ದೇಶದಿಂದ ಮನುವಾದಿಗಳ, ಜಾತಿವಾದಿಗಳ ಜತೆಗೆ ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಈ ಅನುಮತಿ ನೀಡಿದ್ದಾರೆ ಎಂದು ಅಹಿಂದ ರಾಜ್ಯ ಜಂಟಿ ಸಂಚಾಲಕ ಎನ್‌. ವೆಂಕಟೇಶ್‌ ಗೌಡ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next