Advertisement

ಜಾರ್ಜ್‌ ಫೆರ್ನಾಂಡಿಸ್‌ ನಿಧನಕ್ಕೆ ಸುತ್ತೂರು ಶ್ರೀ ಸಂತಾಪ

06:11 AM Feb 01, 2019 | |

ಬೆಂಗಳೂರು: ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ಅವರ ನಿಧನಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಸಮಾಜವಾದಿಯಾಗಿದ್ದ ಜಾರ್ಜ್‌ ಫೆರ್ನಾಂಡಿಸ್‌ ಅವರು ತಮ್ಮ ಸರಳ ಜೀವನಶೈಲಿಯಿಂದ ಮಾದರಿಯಾಗಿದ್ದರು. ಅಧಿಕಾರಕ್ಕಾಗಿ ಆಸೆಪಡದೆ ಜನಸೇವೆಯೇ ಜನಾರ್ದನ ಸೇವೆ ಎಂದು ಜೀವನದುದ್ದಕ್ಕೂ ನಡೆದ ಅವರೊಬ್ಬ ರಾಜಕೀಯ ಸಂತ.

Advertisement

ಭಾರತದ ಅತ್ಯಂತ ದುರ್ಗಮ ಸೇನಾನೆಲೆಯಾದ ಸಿಯಾಚಿನ್‌ಗೆ ತೆರಳಿದ ಮೊದಲ ರಕ್ಷಣಾ ಸಚಿವರೆಂಬ ಹೆಗ್ಗಳಿಕೆ ಅವರದ್ದು. ಧೈರ್ಯದ ಪ್ರತಿರೂಪದಂತಿದ್ದ ಜಾರ್ಜ್‌, ಸಂಸತ್ತಿನ ಮೇಲೆ ಉಗ್ರಗಾಮಿಗಳ ದಾಳಿಯಾದಾಗ ಸಂಸತ್‌ ಭವನದ ಬಾಗಿಲುಗಳನ್ನು ಹಾಕಿಸಿ ಸೈನಿಕರ ಸಹಕಾರದಿಂದ ರಕ್ಷಣಾಕಾರ್ಯ ನಡೆಸಿದ ರೀತಿ ಚರಿತ್ರಾರ್ಹ ಎಂದು ಸ್ಮರಿಸಿದ್ದರಾರೆ.

Advertisement

Udayavani is now on Telegram. Click here to join our channel and stay updated with the latest news.

Next