Advertisement

ಸುರಪುರ: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಜ್

08:52 AM Jun 25, 2020 | Suhan S |

ಸುರಪುರ: ಗುರುವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ತಾಲೂಕಿನ 21 ಪರೀಕ್ಷಾ ಕೇಂದ್ರಗಳಿಗೆ ಬುಧವಾರ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ರಂಗಂಪೇಟೆಯ ಡಾ| ಅಂಬೇಡ್ಕರ್‌ ವಿದ್ಯಾವರ್ಧಕ ಸಂಸ್ಥೆಯ ಪದವಿ ಮತ್ತು ಪಿಯು ಕಾಲೇಜಿನ ಎಲ್ಲ ಕೊಠಡಿ ಹಾಗೂ ಸುತ್ತಲಿನ ಪ್ರದೇಶಕ್ಕೆ ಅಗ್ನಿಶಾಮಕ ಸಿಬ್ಬಂದಿ ಸ್ಯಾನಿಟೈಜ್‌ ಮಾಡಿದರು.

Advertisement

ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ನೇತೃತ್ವದಲ್ಲಿ ಕೇಂದ್ರದ ಎದುರು ವಿದ್ಯಾರ್ಥಿಗಳು ಸರದಿಯಲ್ಲಿ ನಿಲ್ಲಲು ಚೌಕಾಕಾರದ ಗುರುತು ಹಾಕಲಾಯಿತು. ತಾಲೂಕಿನಲ್ಲಿ ಒಟ್ಟು 5837 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಹುಣಸಗಿ-2, ವಜ್ಜಲ್‌-1, ಕೆಂಭಾವಿ 4, ಹೆಚ್ಚುವರಿ 2, ಸುರಪುರ-4 ಹೆಚ್ಚುವರಿ 1, ಕಕ್ಕೇರಾ-1, ದೇವಾಪುರ-1, ಕೊಡೇಕಲ್‌-2, ನಾರಾಯಣಪುರ-2 ಸೇರಿ 15 ಮುಖ್ಯ ಕೇಂದ್ರ ಹಾಗೂ 6 ಉಪ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಸ್ಯಾನಿಟೈಜ್‌ ಮತ್ತು ಮಾಸ್ಕ್ ವಿತರಿಸಲಾಗುವುದು ಎಂದು ಬಿಇಒ ನಾಗರತ್ನ ಓಲೇಕಾರ ತಿಳಿಸಿದ್ದಾರೆ. ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಬಿಅರ್‌ಸಿ ರಾಜೇಂದ್ರ ನಾಯಕ, ಮಹಾದೇವಪ್ಪ ಗುತ್ತೇದಾರ, ಕಾಲೇಜು ಪ್ರಾಚಾರ್ಯ ಗಂಗಾಧರ ರುಮಾಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next