Advertisement

ಕ್ಷುಲ್ಲಕ ಕಾರಣಕ್ಕೆ MC: ಗೋವಾ ಸರ್ಜನ್‌ ಸಸ್ಪೆಂಡ್‌

11:59 AM Oct 26, 2017 | Team Udayavani |

ಪಣಜಿ : ಬಹು ಮುಖ್ಯ ಹಾಗೂ ತುರ್ತು ಕರ್ತವ್ಯವನ್ನು ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಪೊಲೀಸರಿಗೆ ಕ್ಷುಲ್ಲಕ ಕಾರಣಗಳಿಗೆ ಮೆಡಿಕಲ್‌ ಸರ್ಟಿಫಿಕೇಟ್‌ ನೀಡಿದ ದಕ್ಷಿಣ ಜಿಲ್ಲಾ ಆಸ್ಪತ್ರೆಯ ಹಿರಿಯ ಸರ್ಜನ್‌ ಓರ್ವರನ್ನು ಗೋವಾ ಸರಕಾರ ಅಮಾನತುಗೊಳಿಸಿದೆ. 

Advertisement

ಹಿರಿಯ ಸರ್ಜನ್‌ ಡಾ. ಅನಿಲ್‌ ರಾಣೆ ಅವರು ವಿದೇಶಿ ಪ್ರಜೆಗಳಿಗೆ ವೀಸಾ ಅವಧಿ ಮೀರಿ ಭಾರತದಲ್ಲಿನ ತಮ್ಮ ವಾಸ್ತವ್ಯವನ್ನು ಮುಂದುವರಿಸುವುದಕ್ಕೆ ಕೂಡ ಸುಳ್ಳು ಮೆಡಿಕಲ್‌ ಸರ್ಟಿಫಿಕೇಟ್‌ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಗೋವೆಯ ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿ ಮರಿಯಾ ಸೆಮೋರಾ ಡಿ’ಸೋಜಾ  ಅವರು ಕಳೆದ ಅ.12ರಂದು ರಾಣೆ ಅವರನ್ನು ಅಮಾನತುಗೊಳಿಸುವ ಆದೇಶವನ್ನು ಹೊರಡಿಸಿದರು. 

ರಾಣೆ ವಿರುದ್ಧ ಹೆಚ್ಚಿನ ತನಿಖೆ ನಡೆಸುವುದಕ್ಕೆ ಆರೋಗ್ಯ ಇಲಾಖೆಯು ಜಾಗೃತ ನಿರ್ದೇಶನಾಲಯಕ್ಕೆ ವಿಷಯವನ್ನು ಒಪ್ಪಿಸಿರುವುದಾಗಿ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next