Advertisement

Karnataka: ಫಿಲಂ ಚೇಂಬರ್‌ಗೆ ಸುರೇಶ್‌ ನೂತನ ಅಧ್ಯಕ್ಷ

10:53 PM Sep 23, 2023 | Team Udayavani |

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಹಿರಿಯ ನಿರ್ಮಾಪಕ ಮತ್ತು ವಿತರಕ ಎನ್‌.ಎಂ. ಸುರೇಶ್‌ ಆಯ್ಕೆಯಾಗಿದ್ದಾರೆ. ಸೆ.23ರಂದು ನಡೆದ 2023-24ನೇ ಸಾಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಎನ್‌. ಎಂ. ಸುರೇಶ್‌ 337 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

Advertisement

ಈ ಬಾರಿ ಒಟ್ಟು 1,599 ಮತಗಳ ಪೈಕಿ 967 ಮತಗಳು ಚಲಾವಣೆಯಾಗಿದ್ದವು. ಉಳಿದಂತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿಲ್ಪಾ ಶ್ರೀನಿವಾಸ್‌ 217, ಎ. ಗಣೇಶ್‌ 204 ಮತ್ತು ವಿ. ಎಚ್‌. ಸುರೇಶ್‌ (ಮಾರ್ಸ್‌ ಸುರೇಶ್‌) 181 ಮತಗಳನ್ನು ಪಡೆದುಕೊಂಡರು. ವಾಣಿಜ್ಯ ಮಂಡಳಿಯ ನಿರ್ಮಾಪಕರ ವಲಯದ ನೂತನ ಉಪಾಧ್ಯಕ್ಷರಾಗಿ ಪ್ರಮೀಳಾ ಜೋಷಾಯಿ, ಗೌರವ ಕಾರ್ಯದರ್ಶಿಯಾಗಿ ಭಾ.ಮ. ಗಿರೀಶ್‌ ಹಾಗೂ ಖಜಾಂಚಿಯಾಗಿ ಜಯಸಿಂಹ ಮಸೂರಿ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next