Advertisement

Suratkal: ನಡೆದುಕೊಂಡು ಹೋಗುತ್ತಿದ್ದ ನಿವೃತ್ತ ಶಿಕ್ಷಕ ಹೃದಯಾಘಾತದಿಂದ ಮೃತ್ಯು

11:21 PM Sep 10, 2023 | Team Udayavani |

ಸುರತ್ಕಲ್: ಮುಲ್ಕಿ ಸಮೀಪದ ಬೆಳ್ಳಾಯರು ನಿವಾಸಿ ನಿವೃತ್ತ ಶಿಕ್ಷಕ ಕೃಷ್ಣರಾವ್ ರವರು (63) ದೇವಸ್ಥಾನದ ಆವರಣದಲ್ಲಿ ದೇವರ ದರ್ಶನ ನಡೆಸಿ ನಡೆದುಕೊಂಡು ಹೋಗುತ್ತಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

Advertisement

ಕೃಷ್ಣ ರಾವ್ ರವರು ಕುಟುಂಬವೊಂದರ ಕಾರ್ಯಕ್ರಮಕ್ಕೆ ಸುರತ್ಕಲ್ ಸಮೀಪದ ಇಡ್ಯ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ದೇವಸ್ಥಾನದಲ್ಲಿ ದೇವರಿಗೆ ಕೈ ಮುಗಿದು ಆವರಣದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಏಕಾಏಕಿ ಹೃದಯಘಾತದಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದರು ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೃಷ್ಣರಾವ್ ರವರು ದೇವಸ್ಥಾನ ಆವರಣದಲ್ಲಿ ಹೃದಯಾಘಾತದಿಂದ ಕೆಳಗೆ ಬಿದ್ದ ದೃಶ್ಯ ದೇವಸ್ಥಾನದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಕೃಷ್ಣರಾವ್ ರವರು ಕಳೆದ 30 ವರ್ಷಗಳಿಂದ ಪುನರೂರಿನ ಶಾಲೆಯಲ್ಲಿ ಶಿಕ್ಷಕರಾಗಿ ಶೇಷ್ಠ ಶಿಕ್ಷಕ ಪ್ರಶಸ್ತಿಯನ್ನು ಗಳಿಸಿದ್ದರು. ಅಲ್ಲದೆ ಬೆಳ್ಳಾಯರು ಪರಿಸರದಲ್ಲಿ ಧಾರ್ಮಿಕ, ಕೃಷಿ ಹೈನುಗಾರಿಕೆ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next