Advertisement

ಸುರತ್ಕಲ್: ಯುವಕನ ಮೇಲೆ ಮಾರಣಾಂತಿಕ ಹಲ್ಲೆ ; ಐವರ ಬಂಧನ

04:07 PM Feb 13, 2022 | Team Udayavani |

ಮಂಗಳೂರು: ಕೃಷ್ಣಾಪುರದಲ್ಲಿ ಫೆ. ೧ ರಂದು ಮೊಹಮ್ಮದ್ ಅನಾಸ್ ಎಂಬ 29 ವರ್ಷದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ 5  ಮಂದಿ ಆರೋಪಿಗಳನ್ನು ಸುರತ್ಕಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಗಳು ಮೊಹಮದ್ ಶಾರೋಜ್ ಚಾರು(24), ಮೊಹಮ್ಮದ್ ಮುಸ್ತಫಾ ಅಪ್ಪು(22) , ಕೃತ್ಯಕ್ಕೆ ಕಾರು ಒದಗಿಸಿ ಸಹಾಯ ಮಾಡಿದ ಅಬ್ದುಲ್ ಅಮೀನ್ (19) , ಸಿದ್ದಿಕ್ ಸಮದ್ (25) ಮತ್ತು ಮಹಮ್ಮದ್ ನೌಫಿಲ್ (18) ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾದ ಅನಾಸ್ ಅವರು ಚಾರು, ರವೂಫ್ ವಾಸವಿದ್ದ ಬಾಡಿಗೆ ಮನೆ ತೆರವು ಮಾಡಿಸುವಲ್ಲಿ ಮಧ್ಯಸ್ಥಿಕೆ ವಹಿಸಿದ್ದು, ಇದೆ ಸೇಡಿನಲ್ಲಿ ದಾಳಿ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಅನಾಸ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next