Advertisement

ಸೆ. 28ರ ವರೆಗೆ ಸಾಲಗಾರರಿಗೆ ನೆಮ್ಮದಿ: ಮರುಪಾವತಿ ಅವಧಿ; ಸು.ಕೋ. ಮುಂದೂಡಿಕೆ

11:32 PM Sep 10, 2020 | mahesh |

ಹೊಸದಿಲ್ಲಿ: ಆರು ತಿಂಗಳ ಸಾಲ ಮರುಪಾವತಿ ಮುಂದೂಡಿಕೆ ಯೋಜನೆಯಡಿ ಫ‌ಲಾನುಭವಿಗಳಾಗಿರುವ ಸಾಲಗಾರರಿಗೆ ಸುಪ್ರೀಂ ಕೋರ್ಟ್‌ ಸೆ. 28ರ ವರೆಗೆ ನೆಮ್ಮದಿ ನೀಡಿದೆ. ಯಾವುದೇ ಬ್ಯಾಂಕ್‌ ಖಾತೆಗಳನ್ನೂ ಅನುತ್ಪಾದಕ ಆಸ್ತಿ ಎಂದು ಘೋಷಿಸಬಾರದು ಎಂದು ಸೂಚಿಸಿದೆ. ಸೆ. 28ರ ಅನಂತರ ವಿಚಾರಣೆ ಮುಂದೂಡುವುದಿಲ್ಲ ಎಂದೂ ಹೇಳಿದೆ.

Advertisement

ಸಾಲ ಮರುಪಾವತಿ ಮುಂದೂಡಿಕೆ ಅವಧಿಯನ್ನು ವಿಸ್ತರಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಸಾಲಗಾರರಿಗೆ ಸೆ. 28ರ ವರೆಗೆ ನಿರಾಳತೆ ನೀಡಿತು. ಇನ್ನು ಎರಡು ವಾರಗಳಲ್ಲಿ ಸಾಲಗಾರರ ಮೇಲಿನ ಹೊರೆ ಕಡಿಮೆ ಮಾಡುವ ಸಂಬಂಧ ನಿಯಮ ರೂಪಿಸಬೇಕು ಎಂದು ಸೂಚಿಸಿದ ಕೋರ್ಟ್‌, ಸೆ. 28ಕ್ಕೆ ವಿಚಾರಣೆ ಮುಂದೂಡಿತು.

ಈಗಾಗಲೇ 2-3 ಸುತ್ತು ಸಭೆಗಳಾಗಿವೆ. ಆರ್‌ಬಿಐಗಿಂತಲೂ ಮೇಲ್ಮಟ್ಟದಲ್ಲಿ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೋರ್ಟ್‌ಗೆ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next