Advertisement

ಕೊಲಿಜಿಯಂ ಸಭೆ ಮುಂದೂಡಿಕೆ

06:00 AM May 03, 2018 | Team Udayavani |

ನವದೆಹಲಿ: ಉತ್ತರಾಖಂಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ರನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ಪದೋನ್ನತಿ ಕುರಿತಂತೆ ಕರೆಯಲಾಗಿದ್ದ ಸುಪ್ರೀಂ ಕೋರ್ಟ್‌ ಉನ್ನತ ನ್ಯಾಯಮೂರ್ತಿಗಳ ಸಮಿತಿ (ಕೊಲಿಜಿಯಂ) ಸಭೆ ಸ್ಪಷ್ಟ ನಿರ್ಧಾರಕ್ಕೆ ಬಾರದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾ.ಜೆ.ಚಲಮೇಶ್ವರ್‌, ನ್ಯಾ.ರಂಜನ್‌ ಗೊಗೊಯ್‌, ನ್ಯಾ.ಮದನ್‌ ಬಿ.ಲೋಕುರ್‌, ನ್ಯಾ. ಜೋಸೆಫ್ ಸಭೆಯಲ್ಲಿದ್ದರು. 

Advertisement

ಏತನ್ಮಧ್ಯೆ, ಉತ್ತರಾಖಾಂಡ್‌ನ‌ಲ್ಲಿ ಈ ಹಿಂದೆ ಬಿಜೆಪಿ ಹೇರಿದ್ದ ರಾಷ್ಟ್ರಪತಿ ಆಡಳಿತವನ್ನು ನ್ಯಾ. ಕೆ.ಎಂ. ಜೋಸೆಫ್ ಅವರೇ ಅಸಿಂಧು ಗೊಳಿಸಿದ್ದಕ್ಕೆ ಪ್ರತಿಕಾರವಾಗಿ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಏರಿಸಲು ಕೇಂದ್ರ ನಿರಾಕರಿಸಿದೆ ಎಂಬ ಟೀಕೆಯನ್ನು  ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅಲ್ಲಗಳೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next