Advertisement

Hemant Soren: ಕೋರ್ಟ್‌ಗೆ ತಪ್ಪು ಮಾಹಿತಿ ಕೊಟ್ಟದ್ದಕ್ಕೆ ಸೊರೇನ್‌ಗೆ ಸುಪ್ರೀಂ ತರಾಟೆ

09:57 PM May 22, 2024 | Team Udayavani |

ನವದೆಹಲಿ: ಅಕ್ರಮ ಹಣ ಪ್ರಕರಣದಲ್ಲಿ ಆರೋಪಿಯಾಗಿರುವ ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೊರೇನ್‌ ಮಧ್ಯಂತರ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

Advertisement

ಚುನಾವಣೆ ಪ್ರಚಾರಕ್ಕಾಗಿ ಸೊರೇನ್‌ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯದಲ್ಲೂ ಪ್ರಕರಣದ ವಿಚಾರಣೆ ಬಾಕಿಯಿದ್ದು, ಇ.ಡಿ. ಸಲ್ಲಿಸಿದ್ದ ದೂರನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿದ್ದ ವಿಚಾರವನ್ನು ಸೊರೇನ್‌ ಬಹಿರಂಗಪಡಿಸಿರಲಿಲ್ಲ, ಈ ವಿಚಾರವಾಗಿ ನ್ಯಾ.ದೀಪಂಕರ್‌ ದತ್ತಾ ಹಾಗೂ ಸತೀಶ್‌ ಚಂದ್ರ ಶರ್ಮಾ ನೇತೃತ್ವದ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ನೀವು ಬೇರೆ ಪರಿಹಾರ ಬಯಸಿದ್ದೀರಿ. ಈಗ ವಾಸ್ತವ ಸ್ಥಿತಿ ತಿಳಿಸುವುದು ಸರಿಯಲ್ಲ ಎಂದು ವಕೀಲ ಕಪಿಲ್‌ ಸಿಬಲ್‌ಗೆ ತಾಕೀತು ಮಾಡಿದೆ.

ಇದನ್ನೂ ಓದಿ: Shah Rukh Khan: ಬಾಲಿವುಡ್‌ ನಟ ಶಾರುಖ್‌ ಆಸ್ಪತ್ರೆಗೆ ದಾಖಲು, ಡಿಸಾcರ್ಜ್‌

Advertisement

Udayavani is now on Telegram. Click here to join our channel and stay updated with the latest news.

Next