Advertisement

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ :ಸುನೀಲ್ ವಲ್ಲ್ಯಾಪುರೆ

05:19 PM Jun 24, 2020 | sudhir |

ಕಲಬುರಗಿ: ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ವಿಧಾನ ಪರಿಷತ್ ನೂತನ ಸದಸ್ಯ ಸುನೀಲ್ ವಲ್ಲ್ಯಾಪುರೆ ತಿಳಿಸಿದರು.

Advertisement

ವಿಧಾನ ಪರಿಷತ್ ಸದಸ್ಯರಾದ ನಂತರ ಪ್ರಥಮವಾಗಿ ನಗರಕ್ಕೆ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ಐವರು ವಿಧಾನಸಭಾ ಸದಸ್ಯರಿದ್ದಾರೆ. ಅವರಲ್ಲಿ ಒಬ್ಬರಿಗೆ ಸಚಿವರನ್ನಾಗಿಸುವಂತೆ ಸಿಎಂ ಅವರಲ್ಲಿ ಈ ಮುಂಚೆಯೂ ಮನವಿ ಮಾಡಲಾಗಿತ್ತು. ಮುಂದೆಯೂ ಸಹ ಒತ್ತಾಯಿಸಲಾಗುವುದು. ಐವರಲ್ಲಿ ಯಾರಿಗೂ ಕೊಟ್ಟರೂ ಖುಷಿ ಎಂದು ವಿವರಣೆ ನೀಡಿದರು.

ಭೋವಿ (ವಡ್ಡರ್) ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಸಂದರ್ಭದಲ್ಲಿ ಪರಿಗಣಿಸುವುದಾದರೂ ಅರವಿಂದ ಲಿಂಬಾವಳಿ, ಗೂಳಿಹಟ್ಟಿ ಶೇಖರ, ಚಂದ್ರಪ್ಪ ಸೇರಿದಂತೆ ಇತರರಿದ್ದಾರೆ. ತಾವಂತು ಕಲಬುರಗಿ ಜಿಲ್ಲೆಗೆ ಒಂದು ಸ್ಥಾನ ನೀಡುವಲ್ಲಿ ತಮ್ಮ ಒತ್ತಾಯ ಸದಾ ಅಚಲ ಎಂದು ವಲ್ಲ್ಯಾಪುರೆ ಪುನರುಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯರಾಗಿ ಕಲ್ಯಾಣ ಕರ್ನಾಟಕ ಭಾಗದ ಅದರಲ್ಲೂ ಕಲಬುರಗಿ ಜಿಲ್ಲೆಯ ಅಭಿವೃದ್ಧಿ ಗೆ ಶ್ರಮಿಸಲಾಗುವುದು. ತಮ್ಮ ಮೇಲೆ ವಿಶ್ವಾಸವಿಟ್ಟು ಹಾಗೂ ಚಿಂಚೋಳಿ ವಿಧಾನಸಭಾ ಉಪ ಚುನಾವಣಾಯಲ್ಲಿ ಸ್ಪರ್ಧಿಸದೇ ಇರುವುದನ್ನು ಪರಗಣಿಸಿ ವರಿಷ್ಠ ರು ಸ್ಥಾನ ಕಲ್ಪಿಸಿದ್ದಾರೆ. ವರಿಷ್ಠರ ಅಣತಿಯಂತೆ ನಡೆದುಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next