Advertisement

ದ.ಕ. ಜಿಲ್ಲೆ : ಚರ್ಚ್‌ಗಳಲ್ಲಿ ರವಿವಾರದ ಪ್ರಾರ್ಥನೆ ಆರಂಭ

08:54 AM Jun 15, 2020 | mahesh |

ಮಂಗಳೂರು: ಲಾಕ್‌ಡೌನ್‌ ಪ್ರಯುಕ್ತ ಚರ್ಚ್‌ಗಳಲ್ಲಿ ರದ್ದು ಪಡಿಸಿದ್ದ ಪ್ರಾರ್ಥನೆಗಳು 12 ವಾರಗಳ ಬಳಿಕ ಮಂಗಳೂರು ಧರ್ಮ ಪ್ರಾಂತ ದಲ್ಲಿ ಪುನರಾರಂಭಗೊಂಡಿದ್ದು, ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ರವಿವಾರ ಕೊಡಿಯಾಲ್‌ಬೈಲ್‌ನ ಬಿಷಪ್ಸ್‌ ಹೌಸ್‌ ಚಾಪೆಲ್‌ನಲ್ಲಿ ಬಲಿ ಪೂಜೆಯನ್ನು ನಡೆಸಿದರು. ರವಿವಾರ ರೊಜಾರಿಯೋ ಕೆಥೆಡ್ರಲ್‌, ಅದ್ಯಪಾಡಿ, ಮೊಗರ್ನಾಡ್‌, ಮೂಡುಬಿದಿರೆ ಟೌನ್‌, ಪುತ್ತೂರು, ವಿಟ್ಲ, ನಿಡ್ಪಳ್ಳಿ, ಕಾಸ್ಸಿಯಾ, ನೀರುಮಾರ್ಗ ಚರ್ಚ್‌ಗಳಲ್ಲಿ ಬಲಿ ಪೂಜೆಗಳನ್ನು ನಡೆಸಲಾಗಿದೆ.

Advertisement

ಉಡುಪಿ: ಜೂ. 30ರ ತನಕ ಸಾಮೂಹಿಕ ಪ್ರಾರ್ಥನೆ ಇಲ್ಲ
ಉಡುಪಿ: ಭಕ್ತರ ಆರೋಗ್ಯ ಹಾಗೂ ಸುರಕ್ಷೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಉಡುಪಿ ಜಿಲ್ಲೆಯ ಯಾವುದೇ ಚರ್ಚ್‌ನಲ್ಲಿ ಜೂ. 30ರ ವರೆಗೆ ಸಾಮೂಹಿಕ ಪೂಜೆ, ಪ್ರಾರ್ಥನೆಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next