Advertisement
ನಸುಕಿನ ಜಾವ ಹಾಲು, ಪೇಪರ್ ಸೇರಿದಂತೆ ಅಗತ್ಯ ವಸ್ತು ಖರೀದಿಗೆ ಆಗಮಿಸಿದ್ದ ಸಾರ್ವಜನಿಕರು 7ರ ವೇಳೆ ಎಲ್ಲರೂ ಮನೆಯನ್ನು ಸೇರಿಕೊಂಡಿದ್ದರು. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ರಸ್ತೆಯಲ್ಲಿ ಯಾರೂ ತಿರುಗಾಡುವುದು ಕಾಣಲಿಲ್ಲ. ಪಟ್ಟಣದ ಬಸ್ ನಿಲ್ದಾಣದಲ್ಲಿಯೂ ಸಹ ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರದ ನಿರ್ದೇಶನದಂತೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದ್ದಲ್ಲದೇ ಖಾಸಗಿ ವಾಹನಗಳ ಮಾಲೀಕರು ಸಹ ತಮ್ಮ ವಾಹನಗಳ ಓಡಾಟ ಸ್ಥಗಿತಗೊಳಿಸಿದ್ದರು. ಜನರ ಅವಶ್ಯಕತೆ ತಕ್ಕಂತೆ ಒಂದೆರಡು ಆಟೋಗಳು ಸಂಚರಿಸಿದ್ದು ಬಿಟ್ಟರೆ ಬಹುತೇಕವಾಗಿ ಮುಖ್ಯ ರಸ್ತೆಗಳಲ್ಲದೇ ಬಡಾವಣೆಗಳಲ್ಲಿಯ ಚಿಕ್ಕ ಅಂಗಡಿ ಮುಂಗಟ್ಟುಗಳು ಸಹ ಮುಚ್ಚಿದ್ದವು. ಬೆಳಗ್ಗೆ ಸಮಯದಲ್ಲಿ ಕಾಯಪಲ್ಲೆಯನ್ನು ಹೊರತುಪಡಿಸಿ ಸಂಪೂರ್ಣ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದವು.
Advertisement
ತಾಳಿಕೋಟೆ ತಾಲೂಕು ಸಂಪೂರ್ಣ ಸ್ತಬ್ಧ
12:33 PM Jul 20, 2020 | Suhan S |
Advertisement
Udayavani is now on Telegram. Click here to join our channel and stay updated with the latest news.