Advertisement

Daily Horoscope: ಕೆಲ ದಿನಗಳಿಂದ ಅನುಭವಿಸುತ್ತಿದ್ದ ವೇದನೆಯಿಂದ ಮುಕ್ತಿ

07:33 AM Mar 31, 2024 | Team Udayavani |

ಮೇಷ: ಕೃಷಿ ಕ್ಷೇತ್ರದ ಕಾರ್ಯಗಳ ಅವಲೋಕನ. ವಿರಾಮದ ಆನಂದವನ್ನು ಸಮಯದ ಸದುಪಯೋಗದೊಂದಿಗೆ ಅನುಭವಿಸಿ. ಕುಟುಂಬ ಸಹಿತ ಬಂಧು, ಮಿತ್ರರ ಭೇಟಿ. ಹಿರಿಯರ ಮನೆಯಲ್ಲಿ ಶುಭಕಾರ್ಯ.

Advertisement

ವೃಷಭ: ಗೃಹೋತ್ಪನ್ನ ಖಾದ್ಯ ಪದಾರ್ಥಗಳ ಜನಪ್ರಿಯತೆ ವೃದ್ಧಿ. ಮುಂದಿನ ಸಪ್ತಾಹದ ಕಾರ್ಯಗಳಿಗೆ ಇಂದಿನಿಂದಲೇ ಸಿದ್ಧತೆ. ಸಹೋದ್ಯೋಗಿಗಳು ಮತ್ತು ಗೆಳೆಯರ ಭೇಟಿ. ಕುಟುಂಬ ಸಹಿತ ದೇವಾಲಯ ದರ್ಶನ.

ಮಿಥುನ: ಎಲ್ಲ ವರ್ಗ, ಅಂತಸ್ತುಗಳವರಿಗೂ ಸಮಾಧಾನದ ದಿನ. ಉದ್ಯಮಿಗಳ ಆತಂಕ ದೂರ. ದೂರದ ಬಂಧುಗಳು ಮತ್ತು ಹಳೆಯ ಮಿತ್ರರ ಮಿಲನ. ಬಂಧುವರ್ಗದಲ್ಲಿದ್ದ ವರಾನ್ವೇಷಣೆ ಸಮಸ್ಯೆ ನಿವಾರಣೆ.

ಕರ್ಕಾಟಕ: ಸಮಾಜದ ಬಡಮಕ್ಕಳ ವಿದ್ಯಾರ್ಜನೆಗೆ ಸಹಾಯ. ಉದ್ಯೋಗದಲ್ಲಿ ಕಾರ್ಯಕ್ಷಮತೆ ಸುಧಾರಣೆಯ ಕುರಿತು ಚಿಂತನೆ. ಉದ್ಯಮದ ಹೊಸ ಉತ್ಪನ್ನಗಳ ಬಗ್ಗೆ ಪ್ರಚಾರ.ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ.

ಸಿಂಹ: ಪ್ರಾಕೃತಿಕ ತಾಣದಲ್ಲಿ ಕಾಲ ಯಾಪನೆ. ನಿರ್ಮಾಣ ವೃತ್ತಿಯವರಿಗೆ ಒತ್ತಡದಿಂದ ಸ್ವಲ್ಪ ಬಿಡುಗಡೆ. ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರ. ವಸ್ತ್ರ, ಸಿದ್ಧ ಉಡುಪು, ಮೊದಲಾದ ಕೆಲವು ವರ್ಗದ ವ್ಯಾಪಾರಿಗಳಿಗೆ ಉತ್ತಮ ಲಾಭ.

Advertisement

ಕನ್ಯಾ: ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಪ್ರಗತಿ. ಕೌಟುಂಬಿಕ ವ್ಯವಹಾರದ ಸಂಬಂಧ ಪೂರ್ವ ದಿಕ್ಕಿಗೆ ಪ್ರಯಾಣ. ಆಸ್ಪತ್ರೆಗೆ ಭೇಟಿ ಯಿತ್ತು ರೋಗಿಗಳಿಗೆ ಹಣ್ಣು ವಿತರಣೆ. ಸತ್ಸಂಗಕ್ಕೆ ಸಮಯ ಹೊಂದಾಣಿಕೆ.

ತುಲಾ: ಯೋಗ ಹಾಗೂ ಪರ್ಯಾಯ ಚಿಕಿತ್ಸೆಯಲ್ಲಿ ಆಸಕ್ತಿ. ಸಂಗೀತ ಶ್ರವಣದಲ್ಲಿ ಪಾಲುಗೊಳ್ಳುವ ಅವಕಾಶ. ಮಹಿಳೆಯರ ಗೃಹೋತ್ಪನ್ನ ಘಟಕ ಲಾಭ ಗಳಿಕೆ. ಸಂಸಾರದಲ್ಲಿ, ಅನುರಾಗ, ಆರೋಗ್ಯ ವೃದ್ಧಿ.

ವೃಶ್ಚಿಕ: ದಿನವಿಡೀ ಒಳ್ಳೆಯ ಅನುಭವಗಳು. ಅಧ್ಯಯನ ಹಾಗೂ ಪಾಠೇತರ ಚಟುವಟಿಕೆ ಇವೆರಡರಲ್ಲೂ ಮಕ್ಕಳ ಶ್ಲಾಘನಾರ್ಹ ಸಾಧನೆ. ಕೃಷಿ ಕ್ಷೇತ್ರಕ್ಕೆ ಪ್ರವೇಶಿಸಲು ಕಿರಿಯರಿಗೆ ಆಸಕ್ತಿ. ಸಾಮಾಜಿಕ ಕಾರ್ಯಗಳಲ್ಲಿ ಸೇರಿಕೊಳ್ಳುವ ಆಸಕ್ತಿ.

ಧನು: ಕೆಲವು ದಿನಗಳಿಂದ ಅನುಭವಿಸು ತ್ತಿದ್ದ ವೇದನೆಯಿಂದ ಮುಕ್ತಿ. ಮನೆಮಂದಿ ಯೊಂದಿಗೆ ವ್ಯವಸಾಯ ಕ್ಷೇತ್ರಕ್ಕೆ ಭೇಟಿ.ಸಮಾಜಾಭಿ ವೃದ್ಧಿ ಕಾರ್ಯಗಳಲ್ಲಿ ಪಾಲುಗೊಳ್ಳಲು ಎಳೆಯರಿಗೆ ಉತ್ತೇಜನ. ದೇವತಾನುಗ್ರಹ ಉತ್ತಮ.

ಮಕರ: ಉದ್ಯೋಗಕ್ಕೆ ವಿರಾಮವಿದ್ದರೂ ಮನಸ್ಸಿಗೆ ಮಾತ್ರ ಒತ್ತಡ. ಮಕ್ಕಳಿಗೆ ರಜಾದಿನದ ಸದುಪಯೋಗಕ್ಕೆ ಮಾರ್ಗದರ್ಶನ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲುಗೊಳ್ಳುವಿಕೆ. ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಿಗೆ ಸಂದರ್ಶನ.

ಕುಂಭ: ಬಿಡುವಿಲ್ಲದ ಕಾರ್ಯಗಳ ನಡುವೆ ಮಕ್ಕಳಿಗೆ ರಂಜನೆ ನೀಡಿಕೆ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆಗಳು. ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಲು ಕ್ರಮ.

ಮೀನ: ಶನಿ ಪ್ರಭಾವದಿಂದ ಕಾರ್ಯ ವಿಳಂಬವಾದರೂ ಶುಭ ಫ‌ಲಕ್ಕೆ ಕೊರತೆಯಾಗದು. ಅರ್ಧದಲ್ಲಿ ನಿಂತಿದ್ದ ಕಾರ್ಯಗಳು ಪುನರಾರಂಭ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಪಾಲುಗೊಳ್ಳುವಿಕೆ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ. ದಾಂಪತ್ಯ ಜೀವನ ಸುಖಮಯ, ಸಂಸಾರದಲ್ಲಿ ಪ್ರೀತಿ, ವಾತ್ಸಲ್ಯ ವೃದ್ಧಿ

 

Advertisement

Udayavani is now on Telegram. Click here to join our channel and stay updated with the latest news.

Next