Advertisement

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

07:16 AM Apr 21, 2024 | Team Udayavani |

ಮೇಷ: ರಜೆಯ ದಿನವಾದರೂ ಅನೇಕ ಚಟುವಟಿಕೆಗಳು. ಮನೆಯಲ್ಲಿ ಸಂಭ್ರಮದ ವಾತಾವರಣ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ ಯಿಂದ ಮನೋಲ್ಲಾಸ. ದೂರದಲ್ಲಿರುವ ಬಂಧು ಮಿತ್ರರಿಂದ ಶುಭ ಸಮಾಚಾರ.

Advertisement

ವೃಷಭ: ಸಂಸ್ಥೆಗೆ ಹೊಸ ಆಸ್ತಿ ಖರೀದಿ ಮಾತುಕತೆ. ವಿರಾಮದ ಸಂದರ್ಭದಲ್ಲಿ ಓಡಾಟದಿಂದ ಬಹುಮಂದಿಯ ಸಂಪರ್ಕ. ಕುಟುಂಬ ದಲ್ಲಿ ಎಲ್ಲರಿಗೂ ಉಲ್ಲಾಸದ ಮನೋಭಾವ. ಮನೆಯಲ್ಲಿ ಹಬ್ಬದ ವಾತಾವರಣದ ನಡುವೆ ವಿವಾಹ ಮಾತುಕತೆ.

ಮಿಥುನ: ಮನೆಯಲ್ಲಿ ದೇವತಾರ್ಚನೆಯ ಸಂಭ್ರಮ. ಬಂಧುಗಳ ಮನೆಯಲ್ಲಿ ವಿವಾಹ. ವ್ಯವಹಾರಸ್ಥರಿಗೆ ನಿರಾಳ ಮನೋಭಾವ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಹರ್ಷದ ವಾತಾವರಣ.

ಕರ್ಕಾಟಕ: ಮನೆಯಲ್ಲಿ, ಸಂಸಾರದಲ್ಲಿ ಶಾಂತಿ ಹಾಗೂ ಸಾಮರಸ್ಯದ ವಾತಾವರಣ. ಉದ್ಯೋಗಸ್ಥರಿಗೆ ತಾತ್ಕಾಲಿಕ ನೆಮ್ಮದಿ. ವ್ಯವಹಾರ ಕ್ಷೇತ್ರದ ಮಿತ್ರರೊಂದಿಗೆ ಮಿಲನ. ಉದ್ಯೋಗಾಕಾಂಕ್ಷಿ ಶಿಕ್ಷಿತರಿಗೆ ಅವಕಾಶಗಳು ಗೋಚರ.

ಸಿಂಹ: ವ್ಯವಹಾರ ಮತ್ತು ಕಾರ್ಯ ಸುಧಾರಣೆಯ ಚಿಂತೆ. ನೂತನ ಗೃಹ ನಿರ್ಮಾಣ ಕಾರ್ಯ ಮುಂದುವರಿಕೆ. ವೈದ್ಯರು, ಎಂಜಿನಿಯರರು, ನ್ಯಾಯವಾದಿಗಳು ಮೊದಲಾದ ವೃತ್ತಿಪರರಿಗೆ ಕೆಲಸದ ಒತ್ತಡ.

Advertisement

ಕನ್ಯಾ: ಸತ್ಪಾತ್ರರಿಗೆ ದಾನ ಮಾಡುವ ಅವಕಾಶ ಪ್ರಾಪ್ತಿ. ಎಲ್ಲರ ದೇಹಾರೋಗ್ಯ ಉತ್ತಮ. ವ್ಯಾಪಾರ ಕ್ಷೇತ್ರದಲ್ಲಿ ಮಂದಗತಿಯ ಆದರೆ ಸ್ಥಿರವಾದ ಪ್ರಗತಿ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ. ಕುಟುಂಬಸ್ಥರ ಮನೆಯಲ್ಲಿ ವಿವಾಹ.

ತುಲಾ: ಹಿರಿಯ ಬಂಧುವಿನಿಂದ ಬದುಕಿನಲ್ಲಿ ಮಾರ್ಗದರ್ಶನ. ದೂರದಲ್ಲಿರುವ ನೆಂಟರಿಂದ ಶುಭ ಸಮಾಚಾರ. ಬಾಲ್ಯಕಾಲದ ಒಡನಾಡಿಯ ಅಕ ಸ್ಮಾತ್‌ ಭೇಟಿಯಿಂದ ಹೆಚ್ಚಿದ ಹುಮ್ಮಸ್ಸು. ಗೆಳೆಯರ ಜತೆಯಲ್ಲಿ ಸಣ್ಣ ಪ್ರವಾಸದ ಸಾಧ್ಯತೆ.

ವೃಶ್ಚಿಕ: ಸ್ವಂತ ಶಕ್ತಿಯಲ್ಲಿ ಸುಖಜೀವನ ನಡೆಸಲು ತೊಂದರೆಯಾಗದು. ಹಿರಿಯರ ಆರೋಗ್ಯ ಕೊಂಚ ಏರುಪೇರು. ಪರ್ಯಾಯ ಚಿಕಿತ್ಸೆ ಯಿಂದ ಪರಿಹಾರ. ವ್ಯವಹಾರಸ್ಥರಿಗೆ ಅನಿರೀಕ್ಷಿತ ಮೂಲ ದಿಂದ ಧನಾಗಮ. ದೇವತಾರಾಧನೆಯೊಂದಿಗೆ ಹಬ್ಬ.

ಧನು: ಗೃಹಸಂಬಂಧಿ ಕಾರ್ಯಗಳಲ್ಲಿ ತಲ್ಲೀ ನರಾಗುವಿರಿ. ಮಕ್ಕಳ ಮದುವೆಯ ಸಿದ್ಧತೆ. ಗೃಹಾಲಂಕಾರದ ಕೆಲಸಗಾರರಿಗೆ ಕೈತುಂಬಾ ಕೆಲಸ ಹಾಗೂ ಸಂಪಾದನೆ. ದೂರದ ನೆಂಟರ ಆಗಮನ. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ.

ಮಕರ: ತಾಳ್ಮೆ, ಜಾಣ್ಮೆಗಳಿಂದ ವ್ಯವಹಾರ ಗಳಲ್ಲಿ ಯಶಸ್ಸು. ಸಾಧನೆಯ ಮಾರ್ಗದಲ್ಲಿ ಅಚಲವಾಗಿ ನಿಲ್ಲುವುದರಿಂದ ಇಷ್ಟಾರ್ಧ ಸಿದ್ಧಿ. ಉದ್ಯೋಗ ಸಂಬಂಧ ಹೊಸ ವಿದ್ಯೆ ಕಲಿಯುವ ಸಿದ್ಧತೆ. ಶುಭ ಸಮಾರಂಭಕ್ಕಾಗಿ ಬಂಧುಗಳ ಮನೆಗೆ ಭೇಟಿ.

ಕುಂಭ: ಸಮಾಜದಲ್ಲಿ ಗೌರವ ಪ್ರಾಪ್ತಿ. ಜನಸೇವೆಯಲ್ಲಿ ಹೊಸ ಅವಕಾಶಗಳ ಅನ್ವೇಷಣೆ. ಆಸ್ತತ್ರೆ, ಅನಾಥಾಲಯಗಳಿಗೆ ಸಂದ ರ್ಶನ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನದಲ್ಲಿ ವಿಶೇಷ ಪಾತ್ರ. ಹಿರಿಯರಿಗೆ ಸ್ವಾವಲಂಬಿ ಬದುಕು. ಆರೋಗ್ಯ ಉತ್ತಮ.

ಮೀನ: ಆನಂದದಲ್ಲಿ ದಿನವನ್ನು ಕಳೆಯುವಿರಿ. ಶಿವ ವಿಷ್ಣು, ಆಂಜನೇಯರ ಉಪಾಸನೆಯಿಂದ ಸಮಸ್ಯೆಗಳು ದೂರ. ಹಿರಿಯರ ಆರೋಗ್ಯ ಉತ್ತಮ. ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ. ಆಸ್ಪತ್ರೆ, ಅನಾಥಾಶ್ರಮ, ಗೋಶಾಲೆಗಳಿಗೆ ಭೇಟಿ ನೀಡುವ ಸಂಭವ. ಮಕ್ಕಳ ಆರೋಗ್ಯ ಗಮನಹರಿಸಿ.

Advertisement

Udayavani is now on Telegram. Click here to join our channel and stay updated with the latest news.

Next