Advertisement

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

07:20 AM Apr 28, 2024 | Team Udayavani |

ಮೇಷ: ಬಿಡುವಿನ ದಿನವನ್ನು ಹಾಯಾಗಿ ಕಳೆಯಿರಿ. ಉದ್ಯೋಗಸ್ಥರಿಗೆ ನಾಳೆಯ ಕೆಲಸದ ಚಿಂತೆ ಬೇಡ. ಕೆಲವು ವರ್ಗದ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನದ ದಿನ.

Advertisement

ವೃಷಭ: ಮನೆಯಲ್ಲಿ ಹರ್ಷದ ವಾತಾವರಣ. ಬಂಧುವರ್ಗದಲ್ಲಿ ವಿವಾಹ. ಉದ್ಯೋಗಾಕಾಂಕ್ಷಿಗಳಿಗೆ ಸಂದರ್ಭದ ಸದುಪಯೋಗಕ್ಕೆ ಮಾರ್ಗದರ್ಶನ. ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಚಿಂತನೆ.

ಮಿಥುನ: ಮನೆಯಲ್ಲಿ ಆರಾಮದ ವಾತಾವರಣ. ಉದ್ಯೋಗಸ್ಥರಿಂದ ನಾಳೆಯ ಕೆಲಸಗಳ ಸಿದ್ಧತೆ. ವ್ಯವಹಾರಸ್ಥರಿಗೆ ನಿರಾಳ ಮನೋಭಾವ. ಸಮಾಜದ ಸಮಸ್ಯೆಗಳ ಕುರಿತು ಸಮಾನಮನಸ್ಕರೊಂದಿಗೆ ಸಮಾಲೋಚನೆ.

ಕರ್ಕಾಟಕ: ಮನೆಯಲ್ಲಿ ಶಾಂತಿಯ ವಾತಾವರಣ. ಉದ್ಯೋಗಸ್ಥರಿಗೆ ತಾತ್ಕಾಲಿಕ ನೆಮ್ಮದಿ. ವ್ಯವಹಾರ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಚಿಂತನೆ. ವಸ್ತ್ರ ಹಾಗೂ ದಿನ ಬಳಕೆ ಸಾಮಗ್ರಿಗಳ ವ್ಯಾಪಾರಿಗಳಿಗೆ ಉತ್ತಮ ಲಾಭ.

ಸಿಂಹ: ನಿತ್ಯದ ವ್ಯವಹಾರಗಳಿಗೆ ಬಿಡುವಿದ್ದರೂ ವ್ಯವಹಾರದ ಯೋಚನೆ. ನಿವೇಶನ ವ್ಯವಹಾರಸ್ಥರಿಗೆ ಕೊಂಚ ಹಿನ್ನಡೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಎಂದಿನಂತೆ ಲಾಭ. ಗೃಹಿಣಿಯರ ಉದ್ಯಮದ ಆದಾಯ ಹೆಚ್ಚಳ.

Advertisement

ಕನ್ಯಾ: ಹೆಚ್ಚಿನವರ ದೇಹಾರೋಗ್ಯ ಉತ್ತಮ. ವ್ಯಾಪಾರ ಕ್ಷೇತ್ರದಲ್ಲಿ ಸ್ಥಿರವಾದ ಪ್ರಗತಿ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ಹಿರಿಯರು, ಗೃಹಿಣಿಯರು ಮತ್ತು ಮಕ್ಕಳಿಗೆ ಸಮಾಧಾನದ ದಿನ.

ತುಲಾ: ಏಕಾಗ್ರ ಚಿಂತನೆಯಿಂದ ಭವಿಷ್ಯದ ಹಾದಿಯ ಸ್ಪಷ್ಟ ಕಲ್ಪನೆ. ಕೈಗೊಂಡ ಯೋಜನೆ ಯಶಸ್ವಿಯಾಗಲು ಅನುಭವಿಗಳ ನೆರವು. ದೂರದ ಊರಿನಲ್ಲಿರುವ ಬಂಧುಗಳ ಭೇಟಿ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ.

ವೃಶ್ಚಿಕ: ವಸ್ತ್ರಾಭರಣ ಖರೀದಿಗೆ ಧನವ್ಯಯ. ಕೆಲವು ಬಗೆಯ ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ನೆಂಟರ ಜತೆಯಲ್ಲಿ ಆನಂದವಾಗಿ ಕಾಲಯಾಪನೆ ಆಸಕ್ತಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂಭ್ರಮದ ದಿನ.

ಧನು: ಸಂಸಾರ- ವ್ಯವಹಾರ ಎರಡು ಕ್ಷೇತ್ರಗಳಿಂದಲೂ ಒತ್ತಡ. ದೂರದ ಊರಿಗೆ ಅಲ್ಪಾವಧಿ ಭೇಟಿ. ಪಾಲುದಾರಿಕೆ ವ್ಯವಹಾರಗಳಲ್ಲಿ ಸ್ಥಿರವಾದ ಪ್ರಗತಿ. ಮರ, ಕಬ್ಬಿಣ ಹಾಗೂ ಮರದ ಕೆಲಸಗಾರರಿಗೆ ಅಧಿಕ ಕೆಲಸ ಹಾಗೂ ಸಂಪಾದನೆ.

ಮಕರ: ನಾಳೆಯ ಕಾರ್ಯಗಳನ್ನು ಶಿಸ್ತುಬದ್ಧವಾಗಿ ಆಯೋಜಿಸಲು ಚಿಂತನೆ. ಸಾಧನೆಯ ಮಾರ್ಗದಲ್ಲಿ ಮುನ್ನಡೆದು ಇಷ್ಟಾರ್ಧ ಸಿದ್ಧಿ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಅಲ್ಪಾವಧಿಯಲ್ಲಿ ಗರಿಷ್ಠ ಲಾಭ.

ಕುಂಭ: ದೈವ ಚಿಂತನೆಯೊಂದಿಗೆ ಜನಸೇವೆಯಲ್ಲಿ ಹೆಚ್ಚು ಪಾಲುಗೊಳ್ಳುವ ಆಸಕ್ತಿ. ಹೊಸ ಸೇವಾ ಅವಕಾಶಗಳು ಗೋಚರ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ.ಸಮಾಜದಲ್ಲಿ ಗೌರವ ವೃದ್ಧಿ.

ಮೀನ: ಶುಭಫಲಗಳೇ ಹೆಚ್ಚಾಗಿ ಕಾಣುವ ದಿನ. ಶನಿ ಮಹಾತ್ಮನ ಪ್ರೇರಣೆಯಿಂದ ಸತ್ಕರ್ಮಗಳಲ್ಲಿ ಮುನ್ನಡೆ. ಗೃಹಕ್ಕೆ ಸಂಬಂಧಪಟ್ಟ ತುರ್ತು ಕೆಲಸಗಳತ್ತ ಗಮನ. ಕುಲದೇವರ ಸನ್ನಿಧಿಗೆ ಭೇಟಿ. ಹಿರಿಯರ ಆರೋಗ್ಯ ಉತ್ತಮ. ಸಂಗಾತಿಯಿಂದ ವ್ಯವಹಾರದಲ್ಲಿ ಸಕ್ರಿಯ ಸಹಕಾರ.

Advertisement

Udayavani is now on Telegram. Click here to join our channel and stay updated with the latest news.

Next