Advertisement

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

02:22 AM May 04, 2024 | Team Udayavani |

ಮುಂಬಯಿ: ಕಾಂಗ್ರೆಸ್‌ ಮಾಜಿ ನಾಯಕ ಸಂಜಯ್‌ ನಿರುಪಮ್‌ ಶುಕ್ರವಾರ ಶಿವಸೇನೆ(ಶಿಂಧೆ ಬಣ) ಸೇರಿದ್ದಾರೆ. ಅಶಿಸ್ತು ಹಾಗೂ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಇತ್ತೀಚೆಗೆ ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿದ್ದ ನಿರುಪಮ್‌, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ತಾವು ಸ್ಪರ್ಧಿಸಲು ಉದ್ದೇಶಿಸಿದ್ದ ಮುಂಬಯಿ ವಾಯವ್ಯ ಕ್ಷೇತ್ರವು ಮೈತ್ರಿ ಪಕ್ಷ ಶಿವಸೇನೆ(ಉದ್ಧವ್‌ ಬಣ) ಪಾಲಾದ ಹಿನ್ನೆಲೆಯಲ್ಲಿ ನಿರುಪಮ್‌ ಬೇಸರ ಗೊಂಡು ಟೀಕೆಗಳನ್ನು ಮಾಡಿದ್ದರು. ಹೀಗಾಗಿ ಕಾಂಗ್ರೆಸ್‌ನಿಂದ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ 6 ವರ್ಷಗಳ ಕಾಲ ಉಚ್ಚಾಟಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next