Advertisement

ಕೇರಳದಲ್ಲಿ ತೋತಾಪುರಿ ಶೂಟಿಂಗ್

04:20 PM Feb 28, 2021 | Team Udayavani |

ಜಗ್ಗೇಶ್‌ ನಾಯಕರಾಗಿರುವ “ತೋತಾಪುರಿ’ ತಂಡ ಈಗ ಕೇರಳದತ್ತ ಮುಖ ಮಾಡಿದೆ. ಅದು ಚಿತ್ರೀಕರಣಕ್ಕಾಗಿ. ಮೈಸೂರಿನಲ್ಲಿ ಜಗ್ಗೇಶ್‌ ಹಾಗೂ ಅದಿತಿ ಅವರ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿರುವ ಚಿತ್ರತಂಡ, ಈಗ ಕೇರಳದಲ್ಲಿ ಚಿತ್ರೀಕರಣದಲ್ಲಿ ನಿರತವಾಗಿದೆ.

Advertisement

ಧನಂಜಯ್‌ ಹಾಗೂ ಸುಮನ್‌ ರಂಗನಾಥ್‌ ಅವರ ಕಾಂಬಿನೇಶನ್‌ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿದೆ. ಈ ಮೂಲಕ ಸತತವಾಗಿ “ತೋತಾಪುರಿ’ ಚಿತ್ರೀಕರಣದಲ್ಲಿ ತೊಡಗಿದೆ.

ಇದನ್ನೂ ಓದಿ:‘ಸಲಾರ್’ ರಿಲೀಸ್‍ಗೆ ಮುಹೂರ್ತ ಫಿಕ್ಸ್…!

ಈ ಹಿಂದೆ “ತೋತಾಪುರಿ’ ಚಿತ್ರವನ್ನು ಅರ್ಧಕ್ಕೆ ನಿಲ್ಲಿಸಿ, “ಪೆಟ್ರೋಮ್ಯಾಕ್ಸ್‌’ ಚಿತ್ರೀಕರಣದಲ್ಲಿ ತೊಡಗಿದ್ದ ನಿರ್ದೇಶಕ ವಿಜಯ ಪ್ರಸಾದ್‌ ಬಗ್ಗೆ ಜಗ್ಗೇಶ್‌ ಬೇಸರ ಹೊರಹಾಕಿದ್ದರು. ಆದರೆ, ಈಗ ಸತತವಾಗಿ ಚಿತ್ರೀಕರಣವಾಗುವ ಮೂಲಕ ಚಿತ್ರ, ಕೊನೆಯ ಹಂತಕ್ಕೆ ಬಂದಿದೆ.

ಅಂದಹಾಗೆ, “ತೋತಾಪುರಿ’ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಕೆ.ಎ.ಸುರೇಶ್ ನಿರ್ಮಿಸುತ್ತಿದ್ದಾರೆ. 2021ರಲ್ಲಿ ತೆರೆಕಾಣಲಿರುವ ನಿರೀಕ್ಷಿತ ಹಾಗೂ ಬಿಗ್‌ ಬಜೆಟ್‌ ಚಿತ್ರಗಳ ಸಾಲಿನಲ್ಲಿ “ತೋತಾಪುರಿ’ ಕೂಡಾ ಒಂದಾಗಿದೆ.

Advertisement

ಇದನ್ನೂ ಓದಿ: ಬಾಯ್‍ಫ್ರೆಂಡ್ ಜತೆ ರೊಮ್ಯಾಂಟಿಕ್ ಹಗ್…ಮತ್ತೆ ಪ್ರೀತಿಯಲ್ಲಿ ನಟಿ ಶೃತಿ ಹಾಸನ್ ?

Advertisement

Udayavani is now on Telegram. Click here to join our channel and stay updated with the latest news.

Next