Advertisement

ಅರ್ಧ ಎಕರೆ ಜಮೀನು ನೀಡಿದ ಸುಮಲತಾ

12:30 AM Feb 17, 2019 | Team Udayavani |

ಮಂಡ್ಯ: ಹುತಾತ್ಮ ಯೋಧ ಎಚ್‌.ಗುರು ಅವರ ಕುಟುಂಬಕ್ಕೆ ಅರ್ಧ ಎಕರೆ ಜಮೀನನ್ನು ಕೊಡುಗೆಯಾಗಿ ನೀಡುವುದಾಗಿ
ಚಿತ್ರ ನಟಿ ಸುಮಲತಾ ಅಂಬರೀಶ್‌ ತಿಳಿಸಿದ್ದಾರೆ. 

Advertisement

“ಅಮರ್‌’ಚಿತ್ರದ ಅಂತಿಮ ಹಂತದ ಚಿತ್ರೀಕರಣಕ್ಕಾಗಿ ಮಲೇಷ್ಯಾಕ್ಕೆ ತೆರಳಿರುವ ಸುಮಲತಾ, ಅಲ್ಲಿಂದಲೇ ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ. ಗುರು ಅವರ ಅಂತಿಮ ಸಂಸ್ಕಾರ ಹಾಗೂ ಸ್ಮಾರಕ ನಿರ್ಮಾಣಕ್ಕೆ ಜಾಗದ ಸಮಸ್ಯೆಯಿರುವ ವಿಷಯ ನನಗೆ ಈಗಷ್ಟೇ ಗೊತ್ತಾಗಿದೆ.ಇದರಿಂದ ನನ್ನ ಮನಸ್ಸಿಗೆ ತುಂಬಾ ಬೇಸರವಾಗಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರನ್ನು ಗೌರವ,ಮರ್ಯಾದೆಯಿಂದ ಕಳುಹಿಸಿಕೊಡುವುದು ನಮ್ಮ ಧರ್ಮ. ಒಂದು ವೇಳೆ ಸರ್ಕಾರದಿಂದ ಸ್ಮಾರಕ ಅಥವಾ ಅಂತ್ಯಸಂಸ್ಕಾರಕ್ಕೆ ಜಾಗ ನೀಡಲು ಸಾಧ್ಯವಾಗದಿದ್ದರೆ ದೊಡ್ಡರಸಿನ ಕೆರೆ ಗ್ರಾಮದಲ್ಲಿ ನಮ್ಮದೇ ಆದ ಜಾಗವಿದ್ದು, ಅದರಲ್ಲಿ ಅರ್ಧ ಎಕರೆ ಜಾಗ ಕೊಡಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ವಿಷಯವಾಗಿ ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌, ಅಂಬರೀಶ್‌ ಅವರ ಅಣ್ಣನ ಮಗ ಮದನ್‌ ಅವರನ್ನು ಸಂಪ ರ್ಕಿಸಬಹುದು. ಒಂದು ವೇಳೆ, ಸರ್ಕಾರ ಜಾಗ ನೀಡಿದರೆ ಆ ಜಾಗವನ್ನು ವೀರಯೋಧ ಗುರು ಕುಟುಂಬಕ್ಕೆ ಅಂಬರೀಶ್‌ ಕುಟುಂಬದ ಕೊಡುಗೆಯಾಗಿ ನೀಡಲಿದ್ದೇನೆ.

ಇದರಿಂದ ಅಂಬರೀಶ್‌ ಅವರ ಆತ್ಮಕ್ಕೆ ತೃಪ್ತಿ,ಸಂತೋಷ ಸಿಗಲಿದೆ. ಅವರೇ ನಾದರೂ ಬದುಕಿದ್ದರೆ ಇನ್ನೂ ಹೆಚ್ಚಿನ ಸಹಾಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ. “ಬೆಂಗಳೂರಿಗೆ ಬಂದ ಕೂಡಲೇ ನಾನು ಮತ್ತು ಅಭಿ ಇಬ್ಬರೂ ನೊಂದ ಕುಟುಂಬವನ್ನು ಭೇಟಿ ಮಾಡಲಿದ್ದೇವೆ. ಹುತಾತ್ಮ ಯೋಧನ ಕುಟುಂಬಕ್ಕೆ ಭಗವಂತ ನೆಮ್ಮದಿ ನೀಡಲಿ, ಯೋಧರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next