Advertisement

‘ಅವರ ಆಸೆ ಸೋಲಬಾರದೆಂದು ನನ್ನ ಆಸೆ’ : ಸುಮಲತಾ

05:15 AM Feb 10, 2019 | Karthik A |

ಮಂಡ್ಯ: ಅಂಬರೀಷ್ ಪತ್ನಿ ಸುಮಲತಾ ಅವರು ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗಿದ್ದಾರೆಯೇ ಎಂಬ ವಿಚಾರ ಇದೀಗ ರಾಜಕೀಯ ವಲಯದಲ್ಲಿ ಮತ್ತು ಅವರ ಅಭಿಮಾನಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಮಂಡ್ಯ ಜಿಲ್ಲೆಯಲ್ಲಿರುವ ನೆಲಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುಮಲತಾ ಅವರು ಆಡಿರುವ ಮಾತುಗಳು ಈ ಮೇಲಿನ ಹೇಳಿಕೆಗಳಿಗೆ ಪುಷ್ಠಿ ನೀಡುವಂತಿದೆ. ‘ಅಂಬರೀಷ್ ಅವರ ಅಭಿಮಾನಿಗಳು ನಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸಬೇಕೆಂದು ಆಸೆಪಟ್ಟಿದ್ದಾರೆ ; ಅವರ ಆಸೆ ಸೋಲಬಾರದೆಂದು ನನ್ನ ಆಸೆ’ ಎಂದು ಅವರು ಹೇಳಿದರು.


ನಾನು ಸ್ಪರ್ಧಿಸಬೇಕೆಂದು ಈಗಲೂ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ನಾನು ಸೀಸನಲ್ ರಾಜಕಾರಣಿ ಅಲ್ಲ. ನನ್ನ ಪತಿ, ಹೆಂಡತಿ ಮಕ್ಕಳನ್ನು ರಾಜಕೀಯಕ್ಕೆ ತರುತ್ತೇನೆ ಎಂದು ಯಾವತ್ತೂ ಹೇಳಿರಲಿಲ್ಲ. ಹಾಗಾಗಿ ನಾನು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೆಳಿದರು. ಸುಮಲತಾ ಅವರ ಇಂದಿನ ಈ ಹೇಳಿಕೆ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಾರೆ ಎಂಬ ಅಂಶವನ್ನು ಬಲಗೊಳಿಸಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next