Advertisement

ಅಭಿವೃದ್ಧಿಗೆ ಶ್ರಮಿಸುತ್ತೇನೆ ಸುಮಲತಾ ಅಂಬರೀಶ್‌

09:52 PM Apr 07, 2019 | Lakshmi GovindaRaju |

ಭಾರತೀನಗರ: ನನ್ನ ಪತಿ ಅಂಬರೀಶ್‌ ಅವರ ಹಾದಿಯಲ್ಲೇ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನನಗೆ ಅವಕಾಶ ನೀಡಿ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾಅಂಬರೀಶ್‌ ಕೋರಿದರು.

Advertisement

ಇಲ್ಲಿಗೆ ಸಮೀಪದ ಚಿಕ್ಕರಸಿನಕೆರೆ ಜಿ.ಪಂ ವ್ಯಾಪ್ತಿಯ ದೊಡ್ಡರಸಿನಕೆರೆ, ಶೆಟ್ಟಹಳ್ಳಿ, ಕರಡಕೆರೆ, ಗೌಡಯ್ಯನದೊಡ್ಡಿ ಭಾಗಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.

ನಾನು ಚುನಾವಣಾ ಪ್ರಚಾರಕ್ಕೆ ಹೋದಕಡೆಯಲೆಲ್ಲಾ ಅಂಬರೀಶ್‌ ಅಭಿಮಾನಿಗಳು, ಮತದಾರರು ನೀವು ಗೆದ್ದೇ ಗೆಲುತ್ತೀರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಗುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕೆಂದು ಆಶಿಸುತ್ತಿದ್ದಾರೆ ಎಂದರು.

ನನ್ನ ಮೇಲೆ ಇಲ್ಲದ ಸಲ್ಲದ ಆರೋಪ, ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಮತದಾರರೇ ಶಕ್ತಿ ತುಂಬಿದ್ದಾರೆ. ನೀವು ನನ್ನ ಕೈಬಿಡುವುದಿಲ್ಲ ಎಂದು ನಂಬಿದ್ದೇನೆ ಎಂದರು.

ಮಂಡ್ಯ ಜಿಲ್ಲೆಯ ಲೋಕಸಭಾ ಚುನಾವಣೆಯನ್ನು ಇಡೀ ದೇಶವೇ ತಿರುಗಿ ನೋಡುತ್ತಿದೆ. ರಾಜಕೀಯ ಜೀವನವನ್ನು ಮಂಡ್ಯದಿಂದ ಪ್ರಾರಂಭಿಸಿದ್ದೇನೆ. ನೀವು ನನ್ನನ್ನು ಕೈಬಿಡದೆ ಮುನ್ನಡೆಸಿ ಎಂದರು.

Advertisement

ಅಭಿಷೇಕ್‌ಗೌಡ ಮಾತನಾಡಿದರು. ಇದೇ ವೇಳೆ ಮುಖಂಡರಾದ ಜಯಪ್ರಕಾಶ್‌ಗೌಡ, ಮಧು ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next