Advertisement

Sullia ಮಹಿಳೆ ಆತ್ಮಹತ್ಯೆ ಪ್ರಕರಣ: ಸರಕಾರದಿಂದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನೇಮಕ

09:04 PM Aug 25, 2024 | Team Udayavani |

ಸುಳ್ಯ: ಬೆಂಗಳೂರಿನಲ್ಲಿ ನೆಲೆಸಿರುವ ಸುಳ್ಯದ ಉಬರಡ್ಕದ ಮದುವೆಗದ್ದೆ ಎಂ.ಎಸ್‌. ಸುಬ್ರಹ್ಮಣ್ಯ ಮತ್ತು ಉಷಾ ದಂಪತಿಯ ಪುತ್ರಿ ಐಶ್ವರ್ಯಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಗೋವಿಂದನಗರ ಪೋಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ಪರವಾಗಿ ಹೈಕೋರ್ಟ್‌ನಲ್ಲಿ ವಾದಿಸಲು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ (ಎಸ್‌ಪಿಪಿ) ಬೆಂಗಳೂರಿನ ಹಿರಿಯ ನ್ಯಾಯವಾದಿ ಎಂ.ಎಸ್‌. ಶ್ಯಾಮ್‌ಸುಂದರ್‌ ಅವರನ್ನು ಸರಕಾರ ನೇಮಿಸಿದೆ.

Advertisement

ಬಿಇ ಪದವೀಧರೆಯಾಗಿದ್ದ ಸುಳ್ಯದ ಐಶ್ವರ್ಯಾ ಅವರು ಡೈರಿ ರಿಚ್‌ ಸಂಸ್ಥೆಯ ಮಾಲಕ ಕಾಪಿಲ ಗಿರಿಯಪ್ಪ ಗೌಡ ಅವರ ಪುತ್ರ ರಾಜೇಶ್‌ ಅವರ ಪತ್ನಿಯಾಗಿದ್ದು, 2023 ಅ. 26ರಂದು ಬೆಂಗಳೂರಿನಲ್ಲಿರುವ ತಂದೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿಯ ಮನೆಯವರು ಮತ್ತು ಸೋದರ ಮಾವನ ಮನೆಯವರು ನೀಡಿದ ಕಿರುಕುಳದಿಂದಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಐಶ್ವರ್ಯಾ ವಿವರವಾಗಿ ಡೆತ್‌ನೋಟ್‌ ಬರೆದಿಟ್ಟಿದ್ದರಿಂದ ಅವರೆಲ್ಲರ ಮೇಲೆ ಕೇಸು ದಾಖಲಾಗಿ ಗಿರಿಯಪ್ಪ ಗೌಡ ಮತ್ತು ಅವರ ಮನೆಯವರ ಬಂಧನವೂ ನಡೆದಿತ್ತು. ಬಳಿಕ ಅವರು ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದರು. ಪ್ರಕರಣದ ತನಿಖೆಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದರು ಎನ್ನಲಾಗಿದೆ.

ಇದೀಗ ಹೈಕೋರ್ಟ್‌ನಲ್ಲಿ ಈ ಪ್ರಕರಣವನ್ನು ಮುನ್ನಡೆಸಲು ಶ್ಯಾಮಸುಂದರ್‌ ಅವರನ್ನು ನೇಮಿಸಿ ಸರಕಾರ ಆದೇಶಿಸಿದೆ. ಇದರಿಂದಾಗಿ ಈ ಪ್ರಕರಣದ ವಿಚಾರಣೆ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ. ಇದೇ ಪ್ರಕರಣದ ಕೆಳಹಂತದ ನ್ಯಾಯಾಲಯದಲ್ಲಿ ವಾದಿಸುವುದಕ್ಕೂ ಶ್ಯಾಮ್‌ಸುಂದರ್‌ ಅವರನ್ನೇ ನೇಮಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next