Advertisement

ಒಳನಾಡು ಮೀನು ಸಾಕಾಣಿಕೆ ಸೂಕ್ತ

03:01 PM Jan 13, 2022 | Team Udayavani |

ಬೀದರ: ರೈತರ ಆದಾಯ ಹೆಚ್ಚಿಸುವಲ್ಲಿ ಒಳನಾಡು ಮೀನು ಸಾಕಾಣಿಕೆ ಅತ್ಯಂತ ಸೂಕ್ತವಾಗಿದೆ ಎಂದು ಕೆವಿಕೆ ಮುಖ್ಯಸ್ಥ ಡಾ| ಸುನೀಲಕುಮಾರ ಎನ್‌.ಎಮ್‌ ಹೇಳಿದರು.

Advertisement

ಜನವಾಡಾ ಕೆವಿಕೆಯಲ್ಲಿ ರಾಷ್ಟ್ರೀಯ ಮೀನು ಸಾಕಾಣಿಕೆ ಅಭಿವೃದ್ಧಿ ನಿಗಮ ಮತ್ತು ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಹೈದ್ರಾಬಾದ ಪ್ರಾಯೋಜಕತ್ವದಲ್ಲಿ ಪರಶಿಷ್ಟ ಜಾತಿ ರೈತರು ಮತ್ತು ಗ್ರಾಮೀಣ ಯುವಕ- ಯುವತಿಯರಿಗಾಗಿ ಹಮ್ಮಿಕೊಂಡಿದ್ದ ಒಳನಾಡು ಮೀನು ಸಾಕಾಣಿಕೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿ ಉದ್ಯಮದಂತೆ ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಮೀನು ಕೃಷಿ ರೈತರಿಗೆ ಹೆಚ್ಚು ಲಾಭದಾಯಕವಾಗಿದೆ. ಈಗಾಗಲೇ ಒಳನಾಡು ಮೀನುಗಾರಿಕೆ ಹೆಚ್ಚು ಜನಪ್ರಿಯ ಪಡೆಯುತ್ತಿದ್ದು, ಲಕ್ಷಾಂತರ ಜನರು ಮೀನು ಕಸುಬನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಮಿಶ್ರ ಬೆಳೆಯಂತೆ ಮಿಶ್ರ ಮೀನು ಸಾಕಾಣಿಕೆ ಹೆಚ್ಚಿನ ಲಾಭದಾಯಕ ಎಂದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಗೌತಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಕೆವಿಕೆ ವಿಜ್ಞಾನಿ ಡಾ| ಅಕ್ಷಯಕುಮಾರ ಮಾತನಾಡಿದರು. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಜಾನವಿ, ಕೆ.ವಿ.ಕೆ ತೋಟಗಾರಿಕೆ ವಿಜ್ಞಾನಿ ಡಾ| ನಿಂಗದಳ್ಳಿ ಮಲ್ಲಿಕಾರ್ಜುನ, ಡಾ| ಮಲ್ಲೇಶ ಅವರು ವಿವಿಧ ವಿಷಯ ಕುರಿತು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next