Advertisement

ಹುಣಸೂರಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಪ್ರತಿಭಟನೆ ; ಆಕ್ರೋಶ

09:13 PM Jul 08, 2022 | Team Udayavani |

ಹುಣಸೂರು: ಚಲನ ಚಿತ್ರ ನಟ ಕಿಚ್ಚ ಸುದೀಪ್‌ ಅವರು ಆನ್ ಲೈನ್ ರಮ್ಮಿ ಜಾಹಿರಾತಿನಲ್ಲಿ ನಟಿಸಿದ್ದರ ಕುರಿತು ಅಶ್ಲೀಲ ಪದಗಳಿಂದ ನಿಂದಿಸಿ, ಸುದೀಪ್ ಅಭಿಮಾನಿಗಳಿಗೆ ನಿಂದಿಸಿರುವುದನ್ನು ಖಂಡಿಸಿ ಕಿಚ್ಚ ಸುದೀಪ್ ಅಭಿಮಾನಿಗಳ ಬಳಗದ ವತಿಯಿಂದ ಹುಣಸೂರಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

Advertisement

ಸಂವಿಧಾನ ಸರ್ಕಲ್‌ನಲ್ಲಿ ನಗರಸಭೆ ಸದಸ್ಯರಾದ ದೇವರಾಜು ನೇತೃತ್ವದಲ್ಲಿ ಜಮಾವಣೆಗೊಂಡ ನೂರಾರು ಮಂದಿ ಘೋಷಣೆ ಕೂಗುತ್ತಾ ಕಲ್ಪತರು ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅಲ್ಲಿ ಪ್ರತಿಕೃತಿ ದಹಿಸಿ, ಸುದೀಪ್‌ರಿಗೆ ನಿಂದಿಸಿದ ಅಹೋರಾತ್ರ ಹಾಗೂ ಬೆಂಬಲಿಗ ಚರಣ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಹುಣಸೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ರವಿಪ್ರಸಾದ್‌ರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ನಾಯಕ ಸಮುದಾಯದ ಮುಖಂಡರಾದ ಮಯೂರ, ಪ್ರಭಾಕರ್ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next