Advertisement

ಇದು ಅಸಹ್ಯ,ಕೈ ಕೊಟ್ಟ ಮಗನನ್ನು ಹೇಡಿ ಎಂದ ಸಿ.ಎಂ.ಲಿಂಗಪ್ಪ 

01:47 PM Nov 01, 2018 | Team Udayavani |

ರಾಮನಗರ: ‘ನನ್ನ ಮಗ ಹೇಡಿ, ಇಂಥಹ ರಾಜಕಾರಣ ಯಾರೂ ಮಾಡಬಾರದು’ ಎಂದು ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌ ಅವರ ತಂದೆ, ಹಿರಿಯ ಕಾಂಗ್ರೆಸಿಗ ಸಿ.ಎಂ.ಲಿಂಗಪ್ಪ ಅವರು ನೋವಿನ ನುಡಿಗಳನ್ನಾಡಿದ್ದಾರೆ.

Advertisement

ಸುದ್ದಿಗಾರರು ಮಗನ ನಿರ್ಧಾರದ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ಪರಿಷತ್‌ ಸದಸ್ಯರಾಗಿರುವ ಲಿಂಗಪ್ಪ  ‘ನಾನು ಮಗನಿಗೆ ಮೊದಲೇ ಹೇಳಿದ್ದೆ ಬಿಜೆಪಿ ಸೇರ್ಪಡೆಯಾಗಬೇಡ ಎಂದು ಆದರೂ ಹೋಗಿದ್ದ. ನಾವಿಬ್ಬರು ಒಂದೇ ಮನೆಯಲ್ಲಿದ್ದೇವೆ, ಯಾಕೆ ಹೀಗೆ ಮಾಡಿದ ಎಂದು ಗೊತ್ತಿಲ್ಲ, ಕೇಳುತ್ತೇನೆ’ ಎಂದಿದ್ದಾರೆ.

‘ಇಂಥಹ ರಾಜಕಾರಣ ಯಾರೂ ಮಾಡಬಾರದು. ಇದು ಹೇಸಿಗೆ, ಅಸಹ್ಯ. ನನಗೆ ತೀವ್ರ ನೋವು ತಂದಿದೆ’ ಎಂದರು. 

ಗುರುವಾರ ಬೆಳಗ್ಗೆ ಸಂಸದ ಡಿ.ಕೆ.ಸುರೇಶ್‌ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ  ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌  ಜೆಡಿಎಸ್‌ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದಾರೆ ಮಾತ್ರವಲ್ಲದೆ ಕಾಂಗ್ರೆಸ್‌ ಪಕ್ಷಕ್ಕೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next