Advertisement

ಮೀನುಗಾರರಿಗೆ ಸಹಾಯಧನ: ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಕಡ್ಡಾಯ

01:16 AM Feb 22, 2022 | Team Udayavani |

ಉಡುಪಿ: ಮೀನುಗಾರಿಕೆ ಇಲಾಖೆಯಿಂದ ಡೀಸೆಲ್‌ ಮಾರಾಟ ತೆರಿಗೆ ಮರು ಪಾವತಿ, ಕೇಂದ್ರ ಪುರ ಸ್ಕೃತ ಉಳಿತಾಯ ಪರಿಹಾರ ಯೋಜನೆ, ಸಾಂಪ್ರ ದಾಯಿಕ ನಾಡದೋಣಿ ಮೀನುಗಾರರಿಗೆ ಕೋವಿಡ್‌ ಪರಿಹಾರವನ್ನು ಡಿಬಿಟಿ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ತಂತ್ರಾಂಶದಲ್ಲಿ ಫ‌ಲಾನುಭವಿಯ ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆಯಾದ ಬ್ಯಾಂಕ್‌ ಖಾತೆಗೆ ನೇರವಾಗಿ ಸಹಾಯಧನ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ.

Advertisement

ಸಹಾಯ ಧನ ಬಾಕಿ ಇರುವ ಫ‌ಲಾನುಭವಿಗಳು ವಾರಾಂತ್ಯದೊಳಗೆ ಆಧಾರ್‌ ಸಂಖ್ಯೆಯನ್ನು
ಬ್ಯಾಂಕ್‌ ಖಾತೆಗೆ ಜೋಡಣೆ ಮಾಡಬೇಕು. ಜೋಡಣೆಯಾ ಗದೆ ಸಹಾಯಧನ ಪಾವತಿಯಾಗದಿದ್ದರೆ ಇಲಾಖೆ ಜವಾಬ್ದಾರಿಯಲ್ಲ ಎಂದು ಇಲಾಖೆಯ ಜಂಟಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next