Advertisement

Subrahmanya: ಕಾರಿನ ಗಾಜು ಒಡೆದು ಕಳವು

11:41 PM Oct 10, 2023 | Team Udayavani |

ಸುಬ್ರಹ್ಮಣ್ಯ: ಕ್ಷೇತ್ರ ಸಂದರ್ಶನಕ್ಕೆ ಬಂದಿದ್ದ ಕೇರಳದ ವ್ಯಕ್ತಿಯೊಬ್ಬರ ಕಾರಿನ ಗಾಜು ಒಡೆದು ಚಿನ್ನ, ದಾಖಲೆ ಇದ್ದ ಬ್ಯಾಗ್‌ ಕಳವು ಗೈದಿರುವ ಘಟನೆ ರವಿವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.

Advertisement

ಕಣ್ಣೂರು ಜಿಲ್ಲೆಯ ಸುಯಿಶ್‌ ಟಿ.ಸಿ. (34) ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ. ಅವರು ರವಿವಾರ ಸಂಜೆ ಕಾರಿನಲ್ಲಿ, ತನ್ನ ಚಿಕ್ಕಮ್ಮನೊಂದಿಗೆ ಕುಕ್ಕೆಗೆ ಬಂದಿದ್ದು, ರಥ ಬೀದಿಯ ಪಕ್ಕದಲ್ಲಿರುವ ಪಾರ್ಕಿಂಗ್‌ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ. ಬಳಿಕ ಪೂಜಾ ಕಾರ್ಯಕ್ರಮ ಮುಗಿಸಿ ಸ್ವಲ್ಪ ಸಮಯದ ಬಳಿಕ ಕಾರಿನ ಬಳಿ ಬಂದು ನೋಡಿದ ವೇಳೆ ಕಾರಿನ ಹಿಂಬದಿಯ ಗಾಜನ್ನು ಪುಡಿ ಮಾಡಿ ಕಾರಿನಲ್ಲಿದ್ದ ಎರಡು ಬ್ಯಾಗ್‌ ಗಳನ್ನು ಕಳ್ಳರು ಕಳವುಗೈದಿರುವುದು ಕಂಡುಬಂದಿದೆ.

ಕಳುವಾಗಿರುವ ಬ್ಯಾಗ್‌ನಲ್ಲಿ ಅಂದಾಜು 14 ಗ್ರಾಂ ತೂಕದ ಚಿನ್ನದ ಬ್ರಾಸ್‌ ಲೈಟ್‌ ಹಾಗೂ ಆಧಾರ ಕಾರ್ಡ್‌, ಎಟಿಎಂ, ಇತ್ಯಾದಿ ದಾಖಲೆಗಳಿದ್ದವು. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next