Advertisement

ವಿದೇಶಿ ತಂಡದಲ್ಲಿ ಆಡ್ತೇನೆ :ವೇಗಿ ಶ್ರೀಶಾಂತ್‌ ಕಿಡಿ 

04:15 PM Oct 20, 2017 | Team Udayavani |

ಹೊಸದಿಲ್ಲಿ: 2013ರ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹೇರಿದ ಆಜೀವ ನಿಷೇಧವನ್ನು ಕೇರಳ ಹೈಕೋರ್ಟ್‌ ಎತ್ತಿಹಿಡಿದ ಬೆನ್ನಲ್ಲೇ ದಿಕ್ಕು ತೋಚದಂತಾಗಿರುವ ಕೇರಳದ ಕ್ರಿಕೆಟಿಗ ಎಸ್‌.ಶ್ರೀಶಾಂತ್‌ ವಿದೇಶಿ ತಂಡದ ಪರ ಆಡಲು ನಾನು ಸಿದ್ಧನಿದ್ದೇನೆ ಎಂದು ವಿವಾದ ಹುಟ್ಟು ಹಾಕಿದ್ದಾರೆ.

Advertisement

ಎಷ್ಯಾನೆಟ್‌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ‘ಖಾಸಗಿ ಸಂಸ್ಥೆಯಾದ ಬಿಸಿಸಿಐ ಭಾರತದಲ್ಲಿ ಆಡುವುದಕ್ಕೆ ನನಗೆ ನಿಷೇಧ ಹೇರಿದೆ. ಆದರೆ ನಾನು ವಿದೇಶದಲ್ಲಿ ಆಡಬಾರದೆಂದೇನಿಲ್ಲವಲ್ಲ’ ಎಂದಿದ್ದಾರೆ. 

‘ನಾನು ಬೇರೆ ದೇಶದ ಪರ ಆಡಲು ಸ್ವತಂತ್ರನಿದ್ದೇನೆ. ನನಗೀಗ 33 ವರ್ಷ ಹೆಚ್ಚೆಂದರೆ ಇನ್ನು 6 ವರ್ಷ ನಾನು ಆಡಬಹುದು. ನಾನು ಕ್ರಿಕೆಟನ್ನು ಪ್ರೀತಿಸುತ್ತೇನೆ ಮತ್ತು ಆಡಬಯಸುತ್ತೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next