Advertisement

Theft: 1 ಲಕ್ಷ ರೂಪಾಯಿ ಮೌಲ್ಯದ ತುಂಬಿಸಿಟ್ಟ ಅಡಿಕೆ ಕಳವು

01:01 AM Sep 13, 2023 | Team Udayavani |

ಬಜಪೆ: ಕೊಂಪದವು ನೆಲ್ಲಿಗುಡ್ಡೆ ನಿವಾಸಿ ಗೋವಿಂದ ಗೌಡ ಅವರ ಮನೆಯೊಳಗೆ 4 ಗೋಣಿ ಚೀಲದಲ್ಲಿ ಸುಲಿದಿಟ್ಟ ಸುಮಾರು 1 ಲಕ್ಷ ರೂ. ಮೌಲ್ಯದ 200 ಕೆ.ಜಿ. ಅಡಿಕೆಯನ್ನು ಸೆ. 8ರ ರಾತ್ರಿ ಕಳವು ಮಾಡಿರುವುದಾಗಿ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸೆ. 5ರಂದು ಅಡಿಕೆ ಸುಲಿದು ತಲಾ 50 ಕೆಜಿಯಂತೆ 4 ಗೋಣಿ ಚೀಲಗಳಲ್ಲಿ ತುಂಬಿಸಿ ಮಾರಾಟ ಮಾಡುವ ಉದ್ದೇಶದಿಂದ ಕೊಠಡಿಯೊಳಗೆ ಇಟ್ಟಿದ್ದರು. ಜತೆಗೆ ಸುಲಿಯದ 5 ಗೋಣಿ ಚೀಲ ಅಡಿಕೆಯೂ ಇತ್ತು. ಸೆ. 9ರಂದು ಬೆಳಗ್ಗೆ ಎದ್ದು ನೋಡಿದಾಗ ಕಳವಾಗಿರುವುದು ಕಂಡು ಬಂದಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅನುಮಾನಾಸ್ಪದವಾಗಿ ವ್ಯಕ್ತಿಗಳು ಅಡಿಕೆಗಳನ್ನು ಮಾರಾಟ ಮಾಡಲು ಬಂದರೆ ಮಾಹಿತಿ ನೀಡುವಂತೆ ಬಜಪೆ ಪೊಲೀಸ್‌ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next