Advertisement

ಮರಳಿನಲ್ಲಿ “ಮರಳಿ ಅರಳಿ’ದ ಪುನೀತ್‌

12:55 PM Feb 05, 2022 | Team Udayavani |

ಮೂಡುಬಿದಿರೆ: ಆಳ್ವಾಸ್‌ ಕಾಲೇಜಿನ ವಿಶುವಲ್‌ ಆರ್ಟ್‌ ಪದವಿ ವಿಭಾಗದ ಹಿರಿಯ ವಿದ್ಯಾರ್ಥಿ, ಹೊಸ ಬಗೆಯ ಕಲಾಕೃತಿಗಳನ್ನು ರಚಿಸಿ ಈಗಾಗಲೇ 3 ವಿಶ್ವದಾಖಲೆಗಳನ್ನು ನಿರ್ಮಿಸಿರುವ ತಿಲಕ್‌ ಕುಲಾಲ್‌ ಹಾಗೂ ಕಲಾವಿದರಾದ ರೋಹಿತ್‌ ನಾಯಕ್‌, ಅಕ್ಷಿತ್‌ ಕುಲಾಲ್‌ ಅವರು ಪುತ್ತಿಗೆಯ ವನಜಾಕ್ಷಿ ಶ್ರೀಪತಿ ಭಟ್‌ ವೇದಿಕೆಯಲ್ಲಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ 30 ಅಡಿ ಉದ್ದ , 30 ಅಡಿ ಅಗಲದ ಕಲಾಕೃತಿಯನ್ನು ರಚಿಸಿದ್ದಾರೆ.

Advertisement

ಕೆಲವು ವಾರಗಳ ಹಿಂದಷ್ಟೇ ಬೆಳ್ತಿಗೆ ಅಕ್ಕಿ ಹಾಗೂ ಇದ್ದಿಲು ಬಳಸಿ ಆದಿ ಯೋಗಿಯ ಕಲಾಕೃತಿ ರಚಿಸಿ ಪ್ರಸಿದ್ಧಿ ಪಡೆದಿದ್ದರು.

ಸುಮಾರು 3 ಗಂಟೆ ಸಮಯದಲ್ಲಿ 80 ಕೆಜಿ ಇದ್ದಿಲು, 90 ಕೆಜಿ ಮರಳು, ರಂಗೋಲಿ ಹುಡಿಯ ಬಳಕೆಯೊಂದಿಗೆ ಈ ಕಲಾಕೃತಿ ಮೂಡಿಬಂದಿದೆ. ಕನ್ನಡದ ಮಹತ್ವ ಸಾರುವ ಹಳದಿ ಕೆಂಪು ಬಣ್ಣದ ಬಾವುಟವನ್ನು ಚಿತ್ರಿಸಿರುವುದು ಗಮನಾರ್ಹವಾಗಿದೆ.

ಶುಕ್ರವಾರದಿಂದ 3 ದಿನಗಳ ಕಾಲ ಈ ಕಲಾಕೃತಿಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿದೆ. ಆಳ್ವಾಸ್‌ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ್‌ ಆಳ್ವ ಪೂರಕ ಸಹಕಾರ ನೀಡಿದ್ದು, ಮೂಡುಬಿದಿರೆ ಪೋಲಿಸ್‌ ಸಬ್‌ ಇನ್‌ಸ್ಪೆಕ್ಟರ್‌ ಸುದೀಪ್‌ ಕಲಾಕೃತಿಯನ್ನು ವೀಕ್ಷಿಸಿ ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next