Advertisement

ವಿದ್ಯಾರ್ಥಿಯನ್ನು ಕೊಚ್ಚಿ ಕೊಲೆಗೈದು ನೇಣಿಗೆ ಶರಣಾದ

09:08 AM Apr 29, 2019 | Team Udayavani |

ಗದಗ: ವಿದ್ಯಾರ್ಥಿಯೊಬ್ಬನನ್ನುಬರ್ಬರವಾಗಿ ಕೊಚ್ಚಿ ಕೊಲೆಗೈದು ಇನ್ನೋರ್ವ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ರೋಣದ ಜಕ್ಕಲಿ ಗ್ರಾಮದಲ್ಲಿಭಾನುವಾರ ಬೆಳಗಿನಜಾವ ನಡೆದಿದೆ.

Advertisement

18 ವರ್ಷ ಪ್ರಾಯದ ವಿಕಾಸ್‌ ದೊಡ್ಡಮೇಟಿ ಹತ್ಯೆಗೀಡಾದ ವಿದ್ಯಾರ್ಥಿ. ಶೌಕತ್‌ ಅಲಿ ಎಂಬ ವಿದ್ಯಾರ್ಥಿ ಕೊಲೆ ಮಾಡಿದ್ದು, ಕೂಡಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಕಾಸ್‌ ಸೋಮವಾರ ಸಿಇಟಿ ಪರೀಕ್ಷೆ ಬರೆಯುವವನಿದ್ದ ಎಂದು ತಿಳಿದು ಬಂದಿದೆ.

ಬಹಿರ್ದೆಸೆಗೆ ತೆರಳಿದ ವೇಳೆ ಆರಂಭವಾದ ಜಗಳ ಇಬ್ಬರ ಸಾವಿನಲ್ಲಿ ಅಂತ್ಯವಾಗಿದೆ.

ಕುತ್ತಿಗೆಗೆ ಶೌಕತ್‌ ಬಲವಾಗಿ ಕಡಿದಿದ್ದು ವಿಕಾಸ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಭಯದಿಂದ ಶೌಕತ್‌ ಅಲಿ ಮರಕ್ಕೆ ನೇಣು ಬಿಗಿದು ಕೊಂಡಿದ್ದಾನೆ.

Advertisement

ಶೌಕತ್‌ ಅಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎನ್ನಲಾಗಿದೆ.

ನರೇಗಲ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next