Advertisement

ಕಾಂಗ್ರೆಸ್‌ ಪಕ್ಷವನ್ನು ಬಲಿಷ್ಠಗೊಳಿಸಿ: ರಾಕೇಶ್‌ ಮಲ್ಲಿ

08:15 AM Mar 20, 2018 | Team Udayavani |

ಬಸ್ರೂರು: ಕಾಂಗ್ರೆಸ್‌ ಪಕ್ಷದಲ್ಲಿ ದೀನ ದಲಿತರ, ದುರ್ಬಲ ವರ್ಗದವರ, ಅಲ್ಪಸಂಖ್ಯಾಕರ, ಕಾರ್ಮಿಕರ, ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಏಳಿಗೆಯನ್ನು ಕಾಣು ತ್ತಿದ್ದೇವೆ. ಕಾರ್ಮಿಕ ಹಿತ ದೃಷ್ಟಿಯಿಂದ ಇಂಟಕ್‌ ಅಹರ್ನಿಶಿ ದುಡಿಯುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಬಲಿಷ್ಠಗೊಳಿಸಿ ಎಂದು ಕರ್ನಾಟಕ ರಾಜ್ಯ ಇಂಟಕ್‌ ಅಧ್ಯಕ್ಷ ರಾಕೇಶ್‌ ಮಲ್ಲಿ ಹೇಳಿದರು.

Advertisement

ಮಾ. 16ರಂದು ಬಳ್ಕೂರಿನಲ್ಲಿ ನಡೆದ ಬಸೂÅರು – ಬಳ್ಕೂರು ತಾ.ಪಂ. ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಜಿ.ಎ. ಬಾವಾ, ಕೆ.ಡಿ.ಪಿ. ಸದಸ್ಯ ದೇವಾನಂದ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಮಾಣಿಗೋಪಾಲ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕಾಸ ಹೆಗ್ಡೆ, ದಿನೇಶ್‌ ಪುತ್ರನ್‌, ಅಂಪಾರು ಗ್ರಾ.ಪಂ. ಉಪಾಧ್ಯಕ್ಷ ಕಿರಣ ಹೆಗ್ಡೆ, ಬಸೂÅರು ಗ್ರಾ.ಪಂ. ಸದಸ್ಯರಾದ ಜಯಾಧರ ಪೂಜಾರಿ, ಶಶಿಕಲಾ, ಮಾಜಿ ಸದಸ್ಯ ಅಬ್ಟಾಸ್‌ ಬ್ಯಾರಿ, ಅಂಪಾರು ಗ್ರಾ.ಪಂ. ಸದಸ್ಯ ಬಲಾಡಿ ಸಂತೋಷ್‌, ಸಮಾಜ ಸೇವಕ ಕೃಷ್ಣದೇವ ಕಾರಂತ, ಹರಿಪ್ರಸಾದ್‌ ಶೆಟ್ಟಿ, ಮುರಳಿ ಶೆಟ್ಟಿ, ಕೃಷ್ಣಯ್ಯ ಶೆಟ್ಟಿ, ಆತ್ಮಾರಾಮ ಉಪಾಧ್ಯ, ಚಂದ್ರಶೇಖರ ಶೆಟ್ಟಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ ಉಪಸ್ಥಿತರಿದ್ದರು. ತಾ.ಪಂ. ಸದಸ್ಯೆ ಜ್ಯೋತಿ ಪುತ್ರನ್‌ ಸ್ವಾಗತಿಸಿದರು. ಪ್ರದೀಪ್‌ ನಿರೂಪಿಸಿ ತಿಲಕರಾಜ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next