Advertisement

ಬೀದಿ ನಾಯಿ ಜತೆಗೆ ಹುಚ್ಚು ನಾಯಿ ಕಾಟ

09:40 AM Mar 28, 2022 | Team Udayavani |

 ಬೆಳ್ತಂಗಡಿ : ರಸ್ತೆಯಲ್ಲಿ ಎಲ್ಲೆಂದರಲ್ಲಿ ಸಾಕು ನಾಯಿಗಳಾವುವು ಬೀದಿ ನಾಯಿಗಳಾವುವು ಎಂಬ ಆತಂಕ ಸಾರ್ವಜನಿಕರಲ್ಲಿ ಕಾಡತೊಡಗಿದೆ. ಬೀದಿ ನಾಯಿಗಳ ನಿರ್ವಹಣೆ ಇಲ್ಲದೆ ಹುಚ್ಚು ನಾಯಿಗಳು ಹೆಚ್ಚಾಗತೊಡಗಿದೆ.

Advertisement

ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಹೆಚ್ಚಾಗಿರುವುದರಿಂದ ಇದರ ಸಂತಾನ ಶಕ್ತಿ ಹರಣಕ್ಕೆ 1.50 ಲಕ್ಷ ರೂ. ಅನುದಾನ ಇರಿಸಲಾಗಿದೆ. ಆದರೆ ಅದಕ್ಕೆ ಯಾವೊಂದು ತುರ್ತು ಕ್ರಮ ನಡೆಸಿಲ್ಲ. ಬೀದಿನಾಯಿಗಳಿಗೆ ಪ್ರಾಣಿ ಪ್ರಿಯರು ಆಹಾರ ನೀಡುತ್ತಿರುವುದರಿಂದ ಅವು ಆರಾಮವಾಗಿದ್ದು ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ.

ಮುಂಡಾಜೆ ಆಸುಪಾಸು ಕಾಯರ್ತೋಡಿ, ಮೂಲಾರು, ಕೊಡಂಗೆ ಪರಿಸರದಲ್ಲಿ ಹುಚ್ಚುನಾಯಿ ಕಂಡುಬಂದಿದೆ. ಈ ನಾಯಿಯು ಸ್ಥಳೀಯ ಪರಿಸರದ ಹಲವು ಸಾಕುನಾಯಿಗಳಿಗೆ ಕಚ್ಚಿದೆ. ಸ್ಥಳೀಯರು ಮುನ್ನೆಚ್ಚರಿಕೆ ಕೈಗೊಂಡ ಕಾರಣ ಜನರಿಗೆ ಕಚ್ಚುವುದು ತಪ್ಪಿದೆ. ಕಾಯರ್ತೋಡಿ ರಸ್ತೆಯು ಕುಡೆಂಚಿ, ಕಲ್ಲಾರ್ಯ, ಕಡಂಬಳ್ಳಿ ಸೇರಿ ಏಳು ಕಿಮೀ ವ್ಯಾಪ್ತಿಯಿದ್ದು ಈ ಪರಿಸರದ ಜನರಲ್ಲಿ ಹುಚ್ಚುನಾಯಿ ಭೀತಿಯನ್ನು ಮೂಡಿಸಿದೆ. ಸ್ಥಳೀಯ ಜನರು ಇಡೀ ರಾತ್ರಿ ನಿದ್ದೆಗೆಟ್ಟು ಜಾನುವಾರುಗಳಿಗೆ ಹುಚ್ಚುನಾಯಿ ಕಚ್ಚದಂತೆ ಎಚ್ಚರಿಕೆ ವಹಿಸಿದರು.

ಪಶುಸಂಗೋಪನಾ ಇಲಾಖೆ, ಗ್ರಾಮ ಪಂಚಾಯತ್‌ ಹಾಗೂ ಸಂಘ ಸಂಸ್ಥೆಗಳ ವತಿಯಿಂದ ರೇಬಿಸ್‌ ಲಸಿಕೆ ನೀಡುವ ಉಚಿತ ಶಿಬಿರಗಳು ನಡೆದರು ಹಲವರು ತಮ್ಮ ಸಾಕುನಾಯಿಗಳಿಗೆ ಲಸಿಕೆ ನೀಡಲು ಉದಾಸೀನ ತೋರಿದ್ದರು. ಈಗ ಇಲ್ಲಿನ ಹೆಚ್ಚಿನ ನಾಗರಿಕರು ಸಾಕುನಾಯಿಗಳಿಗೆ ಲಸಿಕೆ ನೀಡಲು ಮುಂದಾಗಿದ್ದಾರೆ. ಈ ಪರಿಸರದಲ್ಲಿ ಬೀದಿನಾಯಿಗಳು ಹೆಚ್ಚುತ್ತಿರುವುದು ಹುಚ್ಚುನಾಯಿ ಕಾಟಕ್ಕೆ ಕಾರಣ ಎಂದು ಸ್ಥಳೀಯರು ಆರೋಪ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next