Advertisement

ಪಾಶ್ಚಾತ್ಯ ಆಹಾರ ಪದ್ದತಿಯಿಂದ ದೂರವಿರಿ: ಮುದ್ನಾಳ

05:43 PM Jan 01, 2022 | Team Udayavani |

ಯಾದಗಿರಿ: ಭಾರತೀಯ ಆಹಾರ ಪದ್ಧತಿಯಿಂದ ಆರೋಗ್ಯ ಭಾಗ್ಯ ಲಭಿಸಲಿದ್ದು, ಪಾಶ್ಚಾತ್ಯ ಆಹಾರ ಪದ್ಧತಿಯಿಂದ ದೂರವಿರಬೇಕೆಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ ಹೇಳಿದರು.

Advertisement

ಇಲ್ಲಿನ ಟೋಕ್ರಿ ಕೋಲಿ ಸಮಾಜದ ಜಿಲ್ಲಾ ಕೇಂದ್ರ ಕಾರ್ಯಾಲಯದಲ್ಲಿ ಹೊಸ ವರ್ಷಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಈಗಾಗಲೇ ಹೊಸ ವರ್ಷಗಳು ಬಂದರೆ ಮದ್ಯ-ಮಾಂಸಗಳ ಸೇವನೆ ಮಾಡಿ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ತಮ್ಮ ತನವನ್ನೆ ಮರೆತು ಮನ ಬಂದಂತೆ ನರ್ತಿಸಿ, ಮದ್ಯಪಾನ ಸೇವಿಸಿ ಕುಣಿದು ಕುಪ್ಪಳಿಸಿ ಶಿಷ್ಟಾಚಾರವೇ ಇಲ್ಲದಂತೆ ಆಚರಿಸುವುದು ಉತ್ತಮ ಬೆಳವಣಿಗೆಯಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳ ಪದ್ಧತಿಗೆ ಮನಸೋತು ನಮ್ಮ ಸಂಸ್ಕೃತಿಯನ್ನೆ ಮರೆತು ಮನಬಂದಂತೆ ವರ್ತಿಸುವುದು ದೇಶಕ್ಕೆ ಶೋಭೆ ತರುವಂತಹದ್ದಲ್ಲ ಎಂದರು.

ಈ ಸಂದರ್ಭದಲ್ಲಿ ಸಿದ್ದಪ್ಪ ನಾಲವ್ವಡಗಿ, ಪ್ರಭು ಕೋಡಾಲ, ಯಲ್ಲಪ್ಪ ಬಾಗ್ಲಿ, ಭೀಮಣ್ಣ, ಲಕ್ಷ್ಮಣ ಮಾಸ್ತರ, ನಾಗಪ್ಪ ತಳಿಬಿಡಿ, ಶಂಕರ, ಕಾರ್ತಿಕ, ಮಹೇಶ, ಸಾಬಣ್ಣ, ಯಂಕಪ್ಪ, ಪವನ ಮುದ್ನಳ, ರಮೇಶ ಯಾದಗಿರಿ, ವಿಶಾಲ, ಭೀಮಶಪ್ಪ, ನರಸಪ್ಪ, ಯಲ್ಲಪ್ಪ, ಭೀಮಣ್ಣ ಗಣಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next