Advertisement

ಆಡಳಿತ ಹೇಗೆ ನಡೆಸಬೇಕು ಎಂಬ ಅರಿವು ಕೇಂದ್ರ ಸರಕಾರಕ್ಕೆ ಇಲ್ಲ: ಸಿಎಂ ಇಬ್ರಾಹಿಂ

10:11 AM Jan 18, 2020 | Naveen |

ಮಂಗಳೂರು: ದೇಶದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ, ಹೇಗೆ ನಡೆಸಬೇಕು ಎಂಬ ಅರಿವು ಕೇಂದ್ರ ಸರಕಾರಕ್ಕೆ ಇಲ್ಲ. ಪ್ರಧಾನಿಗೆ ಸಲಹೆ ನೀಡುವವರು ಯಾರು ಇಲ್ಲ, ಬ್ಯಾಂಕುಗಳು ಮುಳುಗಿ ಹೋಗುತ್ತಿದೆ, ಜಗತ್ತಿನಲ್ಲಿ ಭಾರತ ತನ್ನ ತೂಕ ಕಳೆದುಕೊಳ್ಳುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಹೇಳಿದರು.

Advertisement

ಅವರು ಮಂಗಳೂರಿನಲ್ಲಿ ಶುಕ್ರವಾರದಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಜಿಡಿಪಿ 3.30 ಗೆ ಇಳಿದಿದೆ, ಆರ್ಥಿಕ ಸ್ಥಿತಿ ಕುಸಿದು ಹೋಗಿದೆ. ಎನ್‌ಆರ್‌ಸಿ, ಸಿಎಎ ಬಗ್ಗೆ ಮೋದಿ ಹಾಗೂ ಅಮಿತ್ ಶಾ ಗೂ ಗೊಂದಲ ಇದೆ ಎಂದರು.

ಉನ್ನತ ವ್ಯಾಸಂಗ ಮಾಡಿದವರು ನಿರುದ್ಯೋಗದಿಂದ ಅಲೆದಾಡುತ್ತಿದ್ದಾರೆ. ಕತ್ತೆ ಬಾಲಕ್ಕೆ ಡಬ್ಬ ಕಟ್ಟಿ ಬಿಟ್ಟಂತಾಗಿದೆ ಇವರ ಪರಿಸ್ಥಿತಿ. ಸಂವಿಧಾನವೇ ನಮಗೆ ಬೈಬಲ್, ಸಂವಿಧಾನ ಹೇಳಿದಂತೆ ನಡೆಯಬೇಕು. ಜೈ ಶ್ರೀ ರಾಮ್ ಎಂದರೆ ಎಲ್ಲಿ ಹೊಡೆದು ಬಿಡುತ್ತಾರೋ ಎಂಬ ಹೆದರಿಕೆ ಹುಟ್ಟುವಂತಾಗಿದೆ..!. ನಿರ್ಮಲಾ ಸೀತಾರಾಮ್ ಆರ್ಥಿಕ ಸ್ಥಿತಿಗೂ ನಮಗೂ ಸಂಬಂಧ ಇಲ್ಲ ಅಂತ ಇದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next