Advertisement

ಮುನ್ನೆಚ್ಚರಿಕೆ ಕ್ರಮ ನಡುವೆ ಬಸ್‌ ಸಂಚಾರ ಆರಂಭ

05:34 AM May 20, 2020 | Team Udayavani |

ಕಾರವಾರ: ರಾಜ್ಯ ಸರ್ಕಾರದ ಆದೇಶದಂತೆ ಕೆಲ ಮುನ್ನೆಚ್ಚರಿಕಾ ಕ್ರಮಗಳ ನಡುವೆ ಜಿಲ್ಲೆಯಲ್ಲಿಯೂ ಮಂಗಳವಾರ ಬಸ್‌ ಸಂಚಾರ ಆರಂಭವಾಯಿತು. ಸುಮಾರು 58 ದಿನಗಳ ನಂತರ ಬಸ್‌ ಸಂಚಾರ ಪುನರಾರಂಭವಾದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮೊದಲ ಬಸ್‌ ತೆರಳುವ ಮುನ್ನ ಚಪ್ಪಾಳೆ ತಟ್ಟಿ ಶುಭ ಹಾರೈಸಿದರು.

Advertisement

ಕಾರವಾರದಿಂದ ಹುಬ್ಬಳ್ಳಿಗೆ ಬೆಳಗ್ಗೆ 9ಕ್ಕೆ ಮೊದಲ ಬಸ್‌ ಸಂಚಾರ ಆರಂಭಿಸಿತು. ಬಸ್‌ ಪ್ರಯಾಣ ಆರಂಭಿಸುವ ಮುನ್ನ ಪ್ರತಿಯೊಬ್ಬ ಪ್ರಯಾಣಿಕರ ಮಾಹಿತಿ ಪಡೆದುಕೊಂಡು ಅವರ ದೇಹದ ತಾಪಮಾನವನ್ನು ಥರ್ಮಲ್‌ ಸ್ಕ್ರೀನಿಂಗ್‌ ಮೂಲಕ ಪರಿಶೀಲಿಸಲಾಯಿತು. ಅಲ್ಲದೇ ಪ್ರತಿ ಬಸ್‌ನಲ್ಲಿ 30 ಮಂದಿ ಪ್ರಯಾಣಿಕರಿಗಷ್ಟೇ ಅವಕಾಶ ನೀಡಲಾಯಿತು.

ಬಸ್‌ ಸಂಚಾರದ ಹಿನ್ನೆಲೆಯಲ್ಲಿ ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಹುಬ್ಬಳ್ಳಿಗೆ ತೆರಳಲು ಸುಮಾರು 200ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದರು. ಜಿಲ್ಲೆಯ ಕಂಟೇನ್ಮೆಂಟ್‌ ಪ್ರದೇಶವಾದ ಭಟ್ಕಳ ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲೂಕು ಭಾಗಗಳಿಗೆ ಬಸ್‌ ಸಂಚಾರ ಆರಂಭಿಸಲಾಗಿದೆ. ಇನ್ನೂ ದೂರದ ಬೆಂಗಳೂರು, ಮೈಸೂರಿಗೆ ತೆರಳಲು 30 ಮಂದಿ ಪ್ರಯಾಣಿಕರು ಬಂದಲ್ಲಿ ಮಾತ್ರ ಬಸ್‌ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಅವರು ಕನಿಷ್ಠ ಒಂದು ದಿನ ಮೊದಲು ಟಿಕೆಟ್‌ ಬುಕಿಂಗ್‌ ಮಾಡಿಕೊಳ್ಳಬೇಕು ಎಂದು ಕೆಎಸ್‌ ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು. ಶಿರಸಿಯಿಂದ ಬೆಂಗಳೂರಿಗೆ ಎರಡು ಬಸ್‌ ಸಂಚರಿಸಲು ಮಂಗಳವಾರದಿಂದ ಪ್ರಾರಂಭಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next