Advertisement

ಹಿಮವದ್ ಗೋಪಾಲಸ್ವಾಮಿ ದೇವರ ದರ್ಶನ ಪಡೆದ ರಾಜಮೌಳಿ ದಂಪತಿ

05:08 PM Sep 16, 2020 | Hari Prasad |

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಮಗಧೀರ, ಬಾಹುಬಲಿ, ಈಗ, ಸೇರಿದಂತೆ ತೆಲುಗಿನ ಬ್ಲಾಕ್ ಬ್ಲಸ್ಟರ್ ಚಿತ್ರಗಳ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಇದೀಗ ಕರ್ನಾಟಕ ಪ್ರವಾಸದಲ್ಲಿದ್ದಾರೆ.

Advertisement

ಮೂಲತಃ ಕನ್ನಡದವರೇ ಆಗಿರುವ ರಾಜ ಮೌಳಿ ಅವರು ಪತ್ನಿ ಸಮೇತರಾಗಿ ಇಂದು ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದರು.

ದೇವರ ದರ್ಶನ್ಕೆಕ ಪತ್ನಿ ಸಹಿತ ಆಗಮಿಸಿದ್ದ ರಾಜಮೌಳಿ ಅವರು ವೇಣು ಗೋಪಾಲಸ್ವಾಮಿಯ ದರ್ಶನ ಪಡೆದು ಬಳಿಕ ಈ ಪರಿಸರದ ಪ್ರಕೃತಿ ಸೌಂದರ್ಯವನ್ನು ಸವಿದರು.

ಆ ಬಳಿಕ ರಾಜಮೌಳಿ ದಂಪತಿ ಇಲ್ಲಿಂದ ನೇರವಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸಫಾರಿಗೆ ತೆರಳಿದರು.

ಈ ಸಂದರ್ಭದಲ್ಲಿ ಇವರೊಂದಿಗೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಚಾಲಚಂದ್ರ, ವಲಯ ಅರಣ್ಯಾಧಿಕಾರಿ ನವೀನ್ ಇದ್ದರು.



Advertisement
Advertisement

Udayavani is now on Telegram. Click here to join our channel and stay updated with the latest news.

Next