Advertisement

RBI ಹಾಗೂ ಸರಕಾರದ ಮಧ್ಯೆ ಸಂಘರ್ಷ ಒಳ್ಳೆಯದಲ್ಲ

09:53 AM Nov 16, 2018 | Karthik A |

ಹೊಸದಿಲ್ಲಿ: ರಿಸರ್ವ್‌ ಬ್ಯಾಂಕ್‌ ಹಾಗೂ ಸರಕಾರದ ಮಧ್ಯೆ ಸಂಘರ್ಷ ಒಳ್ಳೆಯ ಬೆಳವಣಿಗೆಯಲ್ಲ ಎಂದು ಆರ್‌ಬಿಐ ಮಂಡಳಿ ಸದಸ್ಯ ಎಸ್‌.ಗುರುಮೂರ್ತಿ ಹೇಳಿದ್ದಾರೆ. ಸೋಮವಾರ ನಡೆಯಲಿರುವ ಆರ್‌ಬಿಐ ಮಂಡಳಿ ಸಭೆಗೂ ಮುನ್ನ ಗುರುಮೂರ್ತಿ ಹೇಳಿಕೆ ಮಹತ್ವ ಪಡೆದಿದೆ. ಒಂದೇ ಬಾರಿಗೆ ಎನ್‌ಪಿಎ ಮೇಲೆ ಕಠಿಣ ನಿಯಮ ಹೇರಿದ್ದು ಬ್ಯಾಂಕಿಂಗ್‌ ವ್ಯವಸ್ಥೆಗೆ ಸಮಸ್ಯೆಯಾಗಿ ಪರಿಣಮಿಸಿದೆ. ಬಂಡವಾಳ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಭಾರತ ಒಂದು ಹೆಜ್ಜೆ ಮುಂದಿಡಬೇಕಿದ್ದು, ಎಂಎಸ್‌ಎಂಇ ವಲಯಕ್ಕೆ ಹೆಚ್ಚಿನ ಅವಕಾಶ ಒದಗಿಸಬೇಕಿದೆ. ಇದು ದೇಶದ ಆರ್ಥಿಕತೆಗೆ ದೊಡ್ಡ ಮಟ್ಟದಲ್ಲಿ ಸಹಕಾರ ನೀಡಲಿದೆ ಎಂದಿದ್ದಾರೆ ಗುರುಮೂರ್ತಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next