Advertisement

ಪುರಿ ಜಗನ್ನಾಥ ದೇಗುಲ: ಶಾಲಾ ಮಕ್ಕಳಿಗೆ ಪ್ರತ್ಯೇಕ ಸರತಿ ಸಾಲು ಮೀಸಲು

07:25 PM Dec 27, 2022 | Team Udayavani |

ಪುರಿ: ಒಡಿಶಾದ ಪುರಿ ಜಗನ್ನಾಥ ದೇಗುಲದಲ್ಲಿ ಉಂಟಾದ ತಳ್ಳಾಟದಲ್ಲಿ 9 ಮಂದಿ ವಿದ್ಯಾರ್ಥಿನಿಯರು ಗಾಯಗೊಂಡ ಹಿನ್ನೆಲೆಯಲ್ಲಿ ದೇಗುಲ ಪ್ರವೇಶಕ್ಕೆ ಶಾಲಾ ಮಕ್ಕಳಿಗೆ ಪ್ರತ್ಯೇಕ ಸರತಿ ಸಾಲು ಕಲ್ಪಿಸಲು ಜಿಲ್ಲಾಡಳಿತ ಮಂಗಳವಾರ ತೀರ್ಮಾನಿಸಿದೆ.

Advertisement

ಪ್ರವಾಸದ ಹಿನ್ನೆಲೆಯಲ್ಲಿ ಪುರಿಗೆ ಆಗಿಮಿಸಿದ್ದ ಒಡಿಶಾದ ಮಯೂರ್‌ಭಂಜ್‌ ಜಿಲ್ಲೆಯ ಶಾಲಾ ಮಕ್ಕಳು ದೇಗುಲ ದರ್ಶನಕ್ಕಾಗಿ ಸೋಮವಾರ ರಾತ್ರಿ ಸರದಿಯಲ್ಲಿ ನಿಂತ ವೇಳೆ ಹೆಚ್ಚಿನ ಜನದಟ್ಟಣೆ ಕಾರಣ ತಳ್ಳಾಟ ಉಂಟಾಯಿತು.

ಈ ವೇಳೆ 9 ಬಾಲಕಿಯರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಶಾಲಾ ಪ್ರವಾಸದ ಋತು ಆಗಿರುವುದರಿಂದ ಪುರಿ ಜಗನ್ನಾಥನ ದರ್ಶನಕ್ಕಾಗಿ ಶಾಲಾ ಮಕ್ಕಳಿಗೆ ಪ್ರತ್ಯೇಕ ಸಾಲು ಮೀಸಲಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next